3Kaala News

ಸುಭಾಷಿತ 

ಭೌತಿಕ ಬದುಕಿಗೆ ಆಧ್ಯಾತ್ಮದ ಜ್ಞಾನ ಅವಶ್ಯಕ. ಮನುಷ್ಯ ಧರ್ಮದಿಂದ ವಿಮುಖನಾದರೇ, ಜೀವನ ಅಶಾಂತಿಯ ಕಡಲಾಗುತ್ತದೆ. ಮನುಷ್ಯನ ಬದುಕು ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೆ, ಮಾರಕವಾಗಬಾರದು.  ಸುಳ್ಳು ಹೇಳಲು ಹಲವು ದಾರಿ, ಆದರೆ ಸತ್ಯಕ್ಕೆ ಇರುವುದೊಂದೇ ದಾರಿ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಚಾಮುಂಡಿ ವಿಹಾರ ಕ್ರೀಡಾಂಗಣ ದಲ್ಲಿರುವ ವಸತಿ ನಿಲಯದಲ್ಲಿ ಯೋಗಾಭ್ಯಾಸ ತರಬೇತಿ ಆರಂಭಿಸಬೇಕು; ಕಿಶೋರ್


ಮೈಸೂರು: ಯೋಗಕ್ಕೆ ಅಂತಾರಾಷ್ಟಿçÃಯ ಮನ್ನಣೆ ದೊರೆಯುತ್ತಿರುವ ಈ ದಿನಗಳಲ್ಲಿ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣ ದಲ್ಲಿರುವ ವಸತಿ ನಿಲಯದಲ್ಲಿ ಯೋಗಾಭ್ಯಾಸ ಆರಂಭಿಸಬೇಕು ಎಂದು ಅಂತಾರಾಷ್ಟಿçÃಯ ಯೋಗ ತರಬೇತುದಾರ ಎಂ.ಆರ್.ಕಿಶೋರ್ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಯೋಗಾಸನ ತರಬೇತಿ ಪ್ರಾರಂಭವಾದಲ್ಲಿ ತಳಮಟ್ಟದಿಂದ ಮಕ್ಕಳನ್ನು ಆಯ್ಕೆ ಮಾಡಿ ಅವರಿಗೆ ವೈಜ್ಞಾನಿಕ ತರಬೇತಿಯ ಆಧಾರದ ಮೇಲೆ ಯೋಗ ಕ್ರೀಡಾಪಟುಗಳಿಗೆ ಅತಿ ಹೆಚ್ಚು ಸಾಧನೆ ಮಾಡಲು ಸಾಧ್ಯವಾಗುತ್ತದೆ
ಕರ್ನಾಟಕದಲ್ಲಿ ಈ ತರಬೇತಿ ಪ್ರಾರಂಭವಾದರೆ ದೇಶದಲ್ಲಿ ಮೊದಲ ರಾಜ್ಯ ಯೋಗಾಸನವನ್ನು ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ಪ್ರಾರಂಭಿಸಿದAತಾಗುತ್ತದೆ
ಇಲ್ಲಿ ವಿಶೇಷ ತರಬೇತಿ ಪಡೆದ ಯೋಗ ವಿದ್ಯಾರ್ಥಿಗಳಿಗೆ ತಾಂತ್ರಿಕ ಹಾಗೂ ಸ್ಪರ್ಧಾತ್ಮಕ ತರಬೇತಿ ದೊರೆಯಲಿದೆ. ಇದರಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳು ಸಹ ಯೋಗ ಕ್ಷೇತ್ರದಲ್ಲಿ ಹೆಸರು ಮಾಡಲು ಸಾಧ್ಯವಾಗುತ್ತದೆ. ಶಿಕ್ಷಕರನ್ನು ನೇಮಕ ಮಾಡಿದಲ್ಲಿ
ಇದರೊಡನೆ ವಿಶ್ವಮಟ್ಟದಲ್ಲಿ ಯೋಗಾಸನ ಸ್ಪರ್ಧೆಗಳಲ್ಲಿ ದೇಶಕ್ಕೆ ಹೆಚ್ಚು ಪದಕ ತರುವಂತಾಗುತ್ತದೆ ಎಂದರು.