Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ಸುತ್ತೂರು ಶ್ರೀಗಳ ಸಂತಾಪ


ಮೈಸೂರು; ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಚೆನ್ನಮ್ಮನವರು ದೈವಾಧೀನರಾದುದು ವಿಷಾದದ ಸಂಗತಿ ಎಂದು ಸುತ್ತೂರು ವ್ಮಠದ ಪೀಠಾಧಿಪತಿಗಳಾದ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಹಿನ್ನೆಲೆಯಿಂದ ಬಂದ ಚೆನ್ನಮ್ಮನವರು ಬದುಕಿನುದ್ದಕ್ಕು ಸಂಸ್ಕöÈತಿ ಮತ್ತು ಸಂಸ್ಕಾರಗಳನ್ನು ಬಿಡದೆ ಬಾಳಿದವರು.ಅವರು ಓರ್ವ ಹಿರಿಯ ರಾಜಕಾರಣಿಯ ಪತ್ನಿ ಮಾತ್ರ ಆಗಿರದೆ, ಸರಳತೆ-ಸಜ್ಜನಿಕೆ ಹಾಗೂ ಸಹನೆಯಿಂದ ಜೀವನ ನಡೆಸಿ, ನಾಡಿನ ಜನರ ಅಪಾರ ಗೌರವಕೆ ್ಕಪಾತ್ರರಾಗಿದ್ದರು.ದೇವರಲ್ಲಿ ಅಪಾರ ನಂಬಿಕೆ, ಶ್ರದ್ಧೆ, ಇಟ್ಟಿದ್ದವರು. ಧಾರ್ಮಿಕ ಆಚರಣೆ ಅವರ ಬದುಕಿನ ಒಂದು ಭಾಗವೇ ಆಗಿತ್ತು ಎಂದು ಹೇಳಿದ್ದಾರೆ.
ಎಚ್.ಡಿ.ದೇವೇಗೌಡರ ಸುದೀರ್ಘ ರಾಜಕೀಯ ಹೋರಾಟದ ಬದುಕಿನ ಪ್ರತಿಯೊಂದು ಏಳು-ಬೀಳುಗಳಲ್ಲೂ ಚೆನ್ನಮ್ಮನವರು ಬೆನ್ನೆಲುಬಾಗಿ ನಿಂತು ಅವರಿಗೆ ನೀಡಿದ ಬೆಂಬಲ ಮತ್ತು ತ್ಯಾಗ ಅವಿಸ್ಮರಣೀಯವಾದುದು.ಅವರ ತ್ಯಾಗ ಮತ್ತು ತಾಳ್ಮೆಯನ್ನು ಸ್ವತಃದೇವೇಗೌಡರೇ ಹಲವು ಸಂದರ್ಭಗಳಲ್ಲಿ ಭಾವುಕರಾಗಿ ಸ್ಮರಿಸಿಕೊಂಡಿರುವುದು ಅವರ ವಿಶ್ವಾಸದದ್ಯೋತಕವಾಗಿದೆ ಎಂದು ತಿಳಿಸಿದ್ದಾರೆ. ದೇವೇಗೌಡರ ರಾಜಕೀಯ ಜೀವನದ ಪ್ರತಿ ಹಂತದಲ್ಲೂ ಅವರ ಹೆಜ್ಜೆಗೆ, ಹೆಜ್ಜೆಯಾಗಿ ನಿಂತು ಅವರು, ದೇಶದ ಅತ್ಯುನ್ನತ ಸ್ಥಾನವಾದ ಪ್ರಧಾನಮಂತ್ರಿ ಹುದ್ದೆಯವರೆಗೆ ಏರಲು ನೆರವಾಗಿದ್ದರು.
ಪತಿ ಮತ್ತು ಮಕ್ಕಳು ಅಧಿಕಾರದ ಉನ್ನತಸ್ಥಾನಗಳಲ್ಲಿದ್ದರೂ ಚೆನ್ನಮ್ಮನವರಿಗೆ ಕಿಂಚಿತ್ತೂ ಅಹಂಕಾರವಿರಲ್ಲಿಲ್ಲ. ಅವರ ಸರಳ ಜೀವನ ಶೈಲಿ ಎಲ್ಲರಿಗೂ ಮಾದರಿಯಾಗಿತ್ತು.ಮಾತೃ ಸ್ವರೂಪಿಯಾಗಿ ಅವರು ಇಡೀಕುಟುಂಬವನ್ಮ್ನಅತ್ಯAತ ಪ್ರೀತಿ-ವಾತ್ಸಲ್ಯದಿಂದ ಒಗ್ಗೂಡಿಸಿಕೊಂಡು ಮುನ್ನಡೆಸಿದ ರೀತಿ ಅನನ್ಯವಾದುದು.
ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟುಂಬದ ಸದಸ್ಯರಿಗೆ, ಬಂಧು ಬಾಂಧವರಿಗೆ ಹಾಗೂ ಅಸಂಖ್ಯಾತ ಆತ್ಮೀಯರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಹಾರೈಸುತ್ತೇವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.