
ಪಿರಿಯಾಪಟ್ಟಣ ; ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ನಿರ್ಮೂಲನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯ ಕಾರ್ಯಕ್ರಮ
ವ್ಯಸನ ಮುಕ್ತ ಭಾರತ ನಿರ್ಮಿಸಲು ಸಂಕಲ್ಪ ತೊಡಿ : ಹೆಚ್. ಎನ್ ಸುಧಾಕರ್ಪಿರಿಯಾಪಟ್ಟಣ : ಯುವ ಸಮೂಹ ವ್ಯಸನ ಮುಕ್ತ ಭಾರತ ನಿರ್ಮಿಸಲು ಸಂಕಲ್ಪ ತೊಡಬೇಕು ಎಂದು ಪಿರಿಯಾಪಟ್ಟಣ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಹೆಚ್. ಎನ್ ಸುಧಾಕರ್ ತಿಳಿಸಿದರು.
ಪಟ್ಟಣದ ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವೆ ಯೋಜನೆ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಾದಕ ವಸ್ತುಗಳ ನಿರ್ಮೂಲನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕುತೂಹಲಕ್ಕೆಂದು ಒಮ್ಮೆ ಮಾದಕ ವಸ್ತುಗಳ ಬಳಕೆ ಮಾಡುವುದಕ್ಕೆ ಹೋದರೆ ಮುಂದಿನ ದಿನಗಳಲ್ಲಿ ಮಾದಕ ವ್ಯಸನಿಗಳಾಗುವುದು ಖಂಡಿತ ಹಾಗಾಗಿ ಇಂದಿನ ವಿದ್ಯಾರ್ಥಿ ಹಾಗೂ ಯುವ ಸಮೂಹ ವ್ಯಸನ ಮತ್ತು ದುಶ್ಚಟಗಳಿಗೆ ಬಲಿಯಾಗದೆ ಸ್ವಾಸ್ಥ ಭಾರತ ನಿರ್ಮಾಣ ಮಾಡುವಲ್ಲಿ ಸಂಕಲ್ಪ ತೊಡಬೇಕು.
ಕೆಟ್ಟ ಚಟಗಳಿಗೆ ಬಲಿಯಾದವರು ಮಾನಸಿಕ ಅಸ್ವಸ್ಥತೆ ದೈಹಿಕ ಬಲಹೀನತೆ ಅನುಭವಿಸಿದರ ಜೊತೆಗೆ ಅತ್ಯಾಚಾರ, ಕೊಲೆ, ದರೋಡೆ ಮೊದಲಾದ ಕೃತ್ಯಗಳಲ್ಲಿ ತೊಡಗುತ್ತಿರುವುದು ಅತ್ಯಂತ ಆಘಾತಕಾರಿ ಎಂದು ಹೇಳಿದರು.
ಪಿರಿಯಾಪಟ್ಟಣ ಆರಕ್ಷಕ ಠಾಣೆ ಸಬ್ ಇನ್ಸ್ಪೆಕ್ಟರ್ ಭಾರತಿ ರವರು ಮಾತನಾಡಿ ರಾಷ್ಟ್ರದ ಬದುಕನ್ನೇ ಬದಲಾಯಿಸುವ ಶಕ್ತಿ ಯುವ ಸಮೂಹಕ್ಕಿದೆ ಯುವ ಸಮೂಹದವರು ಹಾಗೂ ಹದಿ ಹರಿಯದ ವಯಸ್ಸಿನವರು ಗಾಂಜಾ, ಅಫಿಮು ಡ್ರಗ್ಸ್ ಸೇವನೆಗಳಂತ ದುಶ್ಚಟಗಳಿಗೆ ಬಲಿಯಾಗಬಾರದು
ಯಾವುದೇ ಕೆಟ್ಟ ಅಭ್ಯಾಸಕ್ಕೆ ಸಿಲುಕದೆ, ನಿಮ್ಮ ಸುತ್ತಮುತ್ತ ನಡೆಯಲಿರುವ ಕೆಟ್ಟ ನಡೆ, ಮಾದಕ ವಸ್ತುಗಳ ಬಳಕೆಯಂತ ಚಟುವಟಿಕೆಗಳನ್ನು ವಿರೋಧಿಸಬೇಕು. ಮಾದಕ ವಸ್ತುಗಳ ಬಳಕೆ ಮಾಡುವವರ ಹಾಗೂ ಮಾರಾಟಮಾಡುವವರ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡಬೇಕು. ಯುವ ಸಮೂಹ ಕೆಟ್ಟ ಚಟಗಳಿಗೆ ಬೀಳಬಾರದು. ಬುದ್ದಿ ನಿಮ್ಮ ಕೈಯಲ್ಲೇ ಇರಬೇಕು. ನಿಮ್ಮ ಕಾಲೇಜಿನಲ್ಲಿ ಅನೇಕ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ ಅವರ ದಾರಿಯಲ್ಲೇ ನೀವು ಸಾಗಿ ಉತ್ತಮ ಪ್ರಜೆಗಳಾಗಬೇಕು ಎಂದು ಹೇಳಿದರು.
ಈ ಸಂದರ್ಭ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರವೀಣ್, ಪದವಿ ಕಾಲೇಜು ಪ್ರಾಂಶುಪಾಲ ಕಿರಣ್, ಮುಖ್ಯ ಶಿಕ್ಷಕಿ ದಿವ್ಯ, ಸಹಾಯಕ ಪ್ರಾಧ್ಯಾಪಕರಾದ, ಸ್ವಾಮಿಗೌಡ ಮಹದೇವ್, ಶ್ರುತಿ, ಅನಿತಾ, ವರ್ಷಿಣಿ, ಅನುಷಾ, ಸಾಗರ್, ಮಂಜುನಾಥ್, ಪಲ್ಲವಿ, ಪ್ರೀತು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.