
ಮೈಸೂರು; ಇಲ್ಲಿನ ಕುವೆಂಪು ನಗರದ ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಾಜ ವತಿಯಿಂದ ಹಸಿರಿದ್ದರೆ ಉಸಿರು ಎಂಬ ಶೀರ್ಷಿಕೆ ಅಡಿಯಲ್ಲಿ ವಿಶ್ವ ಪರಿಸರದ ದಿನದ ಅಂಗವಾಗಿ ಸಮಾಜದ ಸದಸ್ಯರಿಗೆ ಗಿಡ ನೀಡುವುದರ ಮೂಲಕ ವಿಶ್ವ ಪರಿಸರದ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು
ಅಲ್ಲದೆ ಮೆನೂ ಪಾಸ್ ಅವೇರ್ನೆಸ್ ಬಗ್ಗೆ ಜೆ ಎಸ್ ಎಸ್ ಆಸ್ಪತ್ರೆಯ ( ಆಯುರ್ವೇದ ವಿಭಾಗ ) ಡಾ. ತೇಜಸ್ವಿನಿ ಅವರ ತಂಡದಿAದ ಮಾಹಿತಿ ಮತ್ತು ಸಲಹೆಗಳನ್ನು ನೀಡಲಾಯಿತು. ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಯಿತು. ಇದರ ಉಪಯೋಗವನ್ನು ಸಮಾಜದ ಎಲ್ಲಾ ಸದಸ್ಯರು ಪಡೆದುಕೊಂಡರು. ಈ ವೇಳೆ ಸಂಘದ ಉಪಾಧ್ಯಕ್ಷರಾದ ವಿಜಯ ಮಂಜುನಾಥ್, ಲತಾ ರಮೇಶ್, ಯೋಗೀಶ್ವರಿ, ಭಾಗ್ಯ, ಪ್ರೇಮ ಅಶೋಕ್, ಸರಸ್ವತಿ, ಮೀನಾ, ಲತಾ ಮಹೇಶ್, ಹಂಸ ಪದಾಧಿಕಾರಿಗಳು ಉಪಸ್ಥಿತರಿದ್ದರು.