3Kaala News

ಸುಭಾಷಿತ 

ಭೌತಿಕ ಬದುಕಿಗೆ ಆಧ್ಯಾತ್ಮದ ಜ್ಞಾನ ಅವಶ್ಯಕ. ಮನುಷ್ಯ ಧರ್ಮದಿಂದ ವಿಮುಖನಾದರೇ, ಜೀವನ ಅಶಾಂತಿಯ ಕಡಲಾಗುತ್ತದೆ. ಮನುಷ್ಯನ ಬದುಕು ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೆ, ಮಾರಕವಾಗಬಾರದು.  ಸುಳ್ಳು ಹೇಳಲು ಹಲವು ದಾರಿ, ಆದರೆ ಸತ್ಯಕ್ಕೆ ಇರುವುದೊಂದೇ ದಾರಿ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಒಕ್ಕಲಿಗ ಮಹಿಳಾ ಸಮಾಜ ವತಿಯಿಂದ ಪರಿಸರ ದಿನಾಚರಣೆ


ಮೈಸೂರು; ಇಲ್ಲಿನ ಕುವೆಂಪು ನಗರದ ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಾಜ ವತಿಯಿಂದ ಹಸಿರಿದ್ದರೆ ಉಸಿರು ಎಂಬ ಶೀರ್ಷಿಕೆ ಅಡಿಯಲ್ಲಿ ವಿಶ್ವ ಪರಿಸರದ ದಿನದ ಅಂಗವಾಗಿ ಸಮಾಜದ ಸದಸ್ಯರಿಗೆ ಗಿಡ ನೀಡುವುದರ ಮೂಲಕ ವಿಶ್ವ ಪರಿಸರದ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು
ಅಲ್ಲದೆ ಮೆನೂ ಪಾಸ್ ಅವೇರ್ನೆಸ್ ಬಗ್ಗೆ ಜೆ ಎಸ್ ಎಸ್ ಆಸ್ಪತ್ರೆಯ ( ಆಯುರ್ವೇದ ವಿಭಾಗ ) ಡಾ. ತೇಜಸ್ವಿನಿ ಅವರ ತಂಡದಿAದ ಮಾಹಿತಿ ಮತ್ತು ಸಲಹೆಗಳನ್ನು ನೀಡಲಾಯಿತು. ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಯಿತು. ಇದರ ಉಪಯೋಗವನ್ನು ಸಮಾಜದ ಎಲ್ಲಾ ಸದಸ್ಯರು ಪಡೆದುಕೊಂಡರು. ಈ ವೇಳೆ ಸಂಘದ ಉಪಾಧ್ಯಕ್ಷರಾದ ವಿಜಯ ಮಂಜುನಾಥ್, ಲತಾ ರಮೇಶ್, ಯೋಗೀಶ್ವರಿ, ಭಾಗ್ಯ, ಪ್ರೇಮ ಅಶೋಕ್, ಸರಸ್ವತಿ, ಮೀನಾ, ಲತಾ ಮಹೇಶ್, ಹಂಸ ಪದಾಧಿಕಾರಿಗಳು ಉಪಸ್ಥಿತರಿದ್ದರು.