Skip to main content

3Kaala News

ಸುಭಾಷಿತ 

ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.
ಇವತ್ತು ನಿನ್ನನ್ನು ಏನು ನೋಯಿಸುತ್ತಿದೆಯೋ ನಾಳೆ ಅದೇ ನಿನ್ನನ್ನು ಬಲಗೊಳಿಸುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೈಸೂರಿನಲ್ಲಿ ಮಹಿಳಾ ಪ್ರಧಾನ ಏಕವ್ಯಕ್ತಿ ನಾಟಕೋತ್ಸವಕ್ಕೆ ಅರ್ಥಪೂರ್ಣ ತೆರೆ


ಅಘಲೆ’ ನಾಟಕದ ಮೂಲಕ ಮಹಿಳಾ ಬದುಕಿನ ಹೋರಾಟ ಮತ್ತು ವಿಮೋಚನೆಯ ಸಂದೇಶ
ಮೈಸೂರು:
ಕರ್ನಾಟಕ ಏಕೀಕರಣ ಟ್ರಸ್ಟ್, ಮೈಸೂರು ಹಾಗೂ ಸ್ವಾತಂತ್ರ÷್ಯ ಮತ್ತು ಕರ್ನಾಟಕ ಏಕೀಕರಣ ಹೋರಾಟಗಾರ ಡಾ. ಸಿದ್ದನಾಥ ಬಳ್ಳಾರಿ ಅವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಲೇಖಕಿ, ರಂಗಕರ್ಮಿ ಡಾ. ಸುಜಾತ ಅಕ್ಕಿ ಅವರ ಮೂರು ಏಕವ್ಯಕ್ತಿ ಪ್ರದರ್ಶನಗಳ ಮಹಿಳಾ ನಾಟಕೋತ್ಸವವು ‘ಅಘಲೆ’ ನಾಟಕದ ಮನೋಜ್ಞ ಪ್ರದರ್ಶನದೊಂದಿಗೆ ಯಶಸ್ವಿಯಾಗಿ ಸಮಾರೋಪಗೊಂಡಿತು.
ನಾಟಕ ಪ್ರದರ್ಶನಕ್ಕೂ ಮುನ್ನ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರೊ. ಭಾಗ್ಯಲಕ್ಷಿ÷್ಮ, ನಿಸರ್ಗ ಡಾ. ದಿವ್ಯ ಹಾಗೂ ಲೇಖಕಿ ಡಾ. ಸುಜಾತ ಅಕ್ಕಿ ಮಾತನಾಡಿ, ಮಹಿಳಾ ಬದುಕಿನ ಹೋರಾಟ, ಸಮಾನತೆ ಹಾಗೂ ಸಮಾಜದಲ್ಲಿ ಮಹಿಳೆಯ ಪಾತ್ರವನ್ನು ರಂಗಭೂಮಿಯ ಮೂಲಕ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಈ ವಿಶೇಷ ನಾಟಕೋತ್ಸವದಲ್ಲಿ ಮಹಿಳಾ ಬದುಕಿನ ವಿವಿಧ ಆಯಾಮಗಳನ್ನು ಅನಾವರಣಗೊಳಿಸುವ ಮೂರು ಮಹಿಳಾ ಪ್ರಧಾನ ಏಕವ್ಯಕ್ತಿ ನಾಟಕಗಳು ಪ್ರದರ್ಶನಗೊಂಡವು. ಮೊದಲ ನಾಟಕ ‘ಅಹಲ್ಯೆ’ಯಲ್ಲಿ ಪುರಾಣ ಪ್ರಸಿದ್ಧ ಅಹಲ್ಯೆಯ ಕಥೆಯನ್ನು ಹೊಸ ದೃಷ್ಟಿಕೋನದಲ್ಲಿ ನಿರೂಪಿಸಲಾಗಿದೆ. ಇಂದ್ರನ ಮೋಸದ ಜಾಲದಲ್ಲಿ ಸಿಲುಕಿ ತನ್ನದೇ ಅಲ್ಲದ ತಪ್ಪಿಗೆ ಗೌತಮ ಮುನಿಯ ಶಾಪಕ್ಕೆ ಗುರಿಯಾದ ಅಹಲ್ಯೆಯನ್ನು ಸಾಂಪ್ರದಾಯಿಕ ಕಥೆಯಂತೆ ಕಲ್ಲಾಗಿಸುವ ಬದಲು, ಲೇಖಕಿ ಡಾ. ಸುಜಾತ ಅಕ್ಕಿ ಆಕೆಯನ್ನು ಕಾಡಿಗೆ ಕಳುಹಿಸುವ ಮೂಲಕ ಆತ್ಮಾವಲೋಕನ ಮತ್ತು ಸ್ವಾಭಿಮಾನದ ಪ್ರತೀಕವಾಗಿ ಚಿತ್ರಿಸಿದ್ದಾರೆ.
ಎರಡನೇ ನಾಟಕದಲ್ಲಿ ಅಕ್ಕನಾಗಲೆಯ ಹೋರಾಟಮಯ ಬದುಕನ್ನು ತೆರೆದಿಡಲಾಗಿದೆ. ಬಾಲ್ಯದಲ್ಲಿಯೇ ತಮ್ಮ ಬಸವಣ್ಣನೊಂದಿಗೆ ಕಲ್ಯಾಣಕ್ಕೆ ತೆರಳಿ, ಸಾಮಾಜಿಕ ಅಸಮಾನತೆ ಹಾಗೂ ಜಾತಿ-ಲಿಂಗ ಭೇದದ ವಿರುದ್ಧ ಹೋರಾಡಿದ ಅಕ್ಕನಾಗಲೆಯ ಧೈರ್ಯ, ಸಂಕಲ್ಪ ಮತ್ತು ಸಾಮಾಜಿಕ ಕಾಳಜಿಯನ್ನು ನಾಟಕ ಪರಿಣಾಮಕಾರಿಯಾಗಿ ಬಿಂಬಿಸಿದೆ.
ಸಮಾರೋಪದ ‘ಅಘಲೆ’ ನಾಟಕವು ಮಹಿಳೆಯ ಇತಿಹಾಸ, ನಾಗರಿಕತೆಯ ಬೆಳವಣಿಗೆ ಹಾಗೂ ಇಂದಿನ ಸಾಮಾಜಿಕ ವಾಸ್ತವವನ್ನು ಒಟ್ಟುಗೂಡಿಸಿದ ಚಿಂತನಾತ್ಮಕ ಕೃತಿಯಾಗಿದೆ. ಮಾನವ ವಿಕಾಸದ ಪಥದಲ್ಲಿ ಕೃಷಿಯನ್ನು ಕಂಡುಹಿಡಿದು, ಜೋಗುಳದ ಮೂಲಕ ಭಾಷೆ ಮತ್ತು ಸಂಸ್ಕöÈತಿಯನ್ನು ಬೆಳೆಸಿದವಳು ಸ್ತಿçà ಎಂಬ ಸತ್ಯವನ್ನು ನಾಟಕ ನೆನಪಿಸುತ್ತದೆ. ಕುಟುಂಬ ಮತ್ತು ಸಮಾಜವನ್ನು ಪೊರೆಯುವ ಮಹಿಳೆ ಕಾಲಕ್ರಮೇಣ ಪುರುಷಾಧೀನಳಾಗಿ, ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಆಸಿಡ್ ದಾಳಿ, ಕೊಲೆ ಸೇರಿದಂತೆ ಅನೇಕ ರೀತಿಯ ಶೋಷಣೆಗೆ ಒಳಗಾಗುತ್ತಿರುವ ದುರಂತವನ್ನು ಮನಮುಟ್ಟುವ ರೀತಿಯಲ್ಲಿ ಅನಾವರಣಗೊಳಿಸುತ್ತದೆ.
ಅಘಲೆ’ ಪಾತ್ರದಲ್ಲಿ ಕು. ಕಾವ್ಯ ಅವರ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಭಾವಪೂರ್ಣ ಅಭಿನಯ, ಪರಿಣಾಮಕಾರಿ ಸಂಭಾಷಣೆ, ಸಂಗೀತ ಹಾಗೂ ಬೆಳಕಿನ ವಿನ್ಯಾಸ ನಾಟಕದ ಪರಿಣಾಮವನ್ನು ಮತ್ತಷ್ಟು ಹೆಚ್ಚಿಸಿತು. ಮಹಿಳೆಯರ ಮೇಲಿನ ನಿರಂತರ ದೌರ್ಜನ್ಯ, ಶೋಷಣೆ ಹಾಗೂ ಸಾಮಾಜಿಕ ಅಸಮಾನತೆಗಳ ಕುರಿತು ಪ್ರೇಕ್ಷಕರಲ್ಲಿ ಗಂಭೀರ ಚಿಂತನೆ ಮೂಡಿಸುವಲ್ಲಿ ನಾಟಕ ಯಶಸ್ವಿಯಾಯಿತು.
ಮಹಿಳಾ ಲೇಖಕಿಯೇ ರಚಿಸಿ, ವಿನ್ಯಾಸಗೊಳಿಸಿ, ಮಹಿಳಾ ಕಲಾವಿದೆಯರಿಂದಲೇ ಪ್ರದರ್ಶಿಸಲ್ಪಟ್ಟ ಈ ವಿಶಿಷ್ಟ ನಾಟಕೋತ್ಸವ ಮೈಸೂರಿನ ರಂಗಭೂಮಿಯಲ್ಲಿ ಅಪರೂಪದ ಕಲಾ ಪ್ರಯೋಗವಾಗಿ ಪ್ರಶಂಸೆಗೆ ಪಾತ್ರವಾಯಿತು.
ಮೂರು ನಾಟಕಗಳ ರಂಗಪಠ್ಯವನ್ನು ರೂಪಿಸಿ ನಿರ್ದೇಶಕ ಅರಸೀಕೆರೆ ಯೋಗಾನಂದ ಯಶಸ್ವಿಯಾಗಿ ರಂಗದ ಮೇಲೆ ತಂದರು. ಸಂಗೀತವನ್ನು ಸಿದ್ದೇಶ್ವರ ಬದನವಾಳು ಹಾಗೂ ಸುಬ್ರಮಣ್ಯ ಸಂಯೋಜಿಸಿದ್ದು, ಬೆಳಕಿನ ವಿನ್ಯಾಸವನ್ನು ಜೀವನ್ ಕುಮಾರ್ ಬಿ. ಹೆಗ್ಗೋಡು ನಿರ್ವಹಿಸಿದ್ದರು. ಮೂರು ನಾಟಕಗಳ ರಚನೆ ಡಾ. ಸುಜಾತ ಅಕ್ಕಿ ಅವರದ್ದಾಗಿದೆ.
ಸಮಾರಂಭದಲ್ಲಿ ಹಿರಿಯ ರಂಗಕರ್ಮಿ ಎನ್.ಎಸ್. ಗೋಪಿನಾಥ್, ಪೃಥ್ವಿ ಸಾಂಸ್ಕöÈತಿಕ ಸಂಸ್ಥೆಯ ಕಾರ್ಯದರ್ಶಿ ಅರಸೀಕೆರೆ ಯೋಗಾನಂದ, ‘ನಿರಂತರ’ದ ನಿರ್ದೇಶಕ ಶ್ರೀನಿವಾಸ್ ಪಾಲಹಳ್ಳಿ ಸೇರಿದಂತೆ ಅನೇಕ ರಂಗಕರ್ಮಿಗಳು, ಸಾಹಿತ್ಯಾಸಕ್ತರು, ಕಲಾಭಿಮಾನಿಗಳು ಹಾಗೂ ಪ್ರೇಕ್ಷಕರು ಉಪಸ್ಥಿತರಿದ್ದು, ನಾಟಕೋತ್ಸವದ ಯಶಸ್ಸಿಗೆ ಸಾಕ್ಷಿಯಾದರು.