
ಮೈಸೂರು; ವನ್ಯಜೀವಿ ಛಾಯಾಗ್ರಾಹಕರಾದ ಎಸ್ ಆರ್ ಮಧುಸೂದನ, ಶೇಷಾದ್ರಿ ವಿ ಹಾಗೂ ಭಾಸ್ಕರ್ ಎಂ ಆರ್ ಅವರಿಗೆ ಫೆಡರೇಶನ್ ಆಫ್ ಇಂಡಿಯನ್ ಫೋಟೋಗ್ರಾಫಿ ವತಿಯಿಂದ ಕೊಡ ಮಾಡುವ ಎಕ್ಸಲೆನ್ಸ್ ಫೆಡರೇಶನ್ ಆಫ್ ಇಂಡಿಯನ್ ಫೋಟೋಗ್ರಫಿ ಪದನಾಮ ವನ್ನು ಗಳಿಸಿದ್ದಾರೆ.
ಈ ಠಿಜನಾಮ ಗಳಿಸಲು 300ಕ್ಕೂ ಹೆಚ್ಚು ವಿವಿಧ ಛಾಯಾಚಿತ್ರಗಳಿಗೆ ಮಾನ್ಯತೆ ಪಡೆದಿರಬೇಕು. ಹಾಗೂ 50ಕ್ಕೂ ಹೆಚ್ಚು ಛಾಯಾಚಿತ್ರಗಳಿಗೆ ನ್ಯಾಷನಲ್ ಹಾಗೂ ಇಂಟರ್ನಾ್ಯಷನಲ್ ಪ್ರಶಸ್ತಿ ಪಡೆದಿರಬೇಕು. ಇದು ಭಾರತದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿರುತ್ತದೆ. ಈ ಪದನಾಮ ಪಡೆಯಲು ಭಾರತ ಹಾಗೂ ವಿದೇಶಿ ಛಾಯಾಗ್ರಹಕರುಗಳು ಭಾಗವಹಿಸಿರುತ್ತಾರೆ. ಇದರಲ್ಲಿ ಮೈಸೂರಿನ ಮೂವರು ವನ್ಯಜೀವಿ ಛಾಯಾಗ್ರಾಹಕರುಗಳಾದ ಮಧುಸೂಧನ ಎಸ್ಆರ್, ಶೇಷಾದ್ರಿ ವಿ ಹಾಗೂ ಭಾಸ್ಕರ್ ಎಂ ಆರ್ ಅವರಿಗೆ ಲಭ್ಯವಾಗಿರುವುದು ಮೈಸೂರಿಗೆ ಹೆಮ್ಮೆಯ ವಿಷಯವಾಗಿದೆ.