
ಮೈಸೂರು: ವಿದ್ಯಾರ್ಥಿಗಳೇ ಒಂದು ದೇಶದ ನಿಜವಾದ ರಾಯಭಾರಿಗಳು. ಅವರು ದೇಶದ ಪ್ರತಿಷ್ಠೆಯನ್ನು ವಿಶ್ವ ಮಟ್ಟಕ್ಕೆ ಏರಿಸಲು ಸಾಧ್ಯ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಸ್ವಾಮಿ ವಿ ಎಂ ಹೇಳಿದರು.
ನಗರದ ಮೈಸೂರು ಇನ್ಸಿ÷್ಟಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ & ಕಲಿನರಿ (ಎಂಐಎಚ್ಎAಸಿ) ನಲ್ಲಿ ಇಂದು ದೇಶದ 80ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, “ಕೌಶಲ್ಯ ಶಿಕ್ಷಣ ಇಂದಿನ ತುರ್ತು. ವಿದ್ಯಾರ್ಥಿಗಳು ನಮ್ಮ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಗಂಭೀರವಾಗಿ ಓದಿನಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದರು.
“ಒAದು ದೇಶದ ಹೆಗ್ಗಳಿಕೆಯನ್ನು ವಿಶ್ವದಾದ್ಯಂತ ಪಸರಿಸುವಲ್ಲಿ ಹೋಟೆಲ್ ಉದ್ಯಮದ ಪಾತ್ರ ಮಹತ್ವದ್ದು. ತಮ್ಮ ಸೇವೆ ಮೂಲಕ ಅವರು ವಿದೇಶಗಳಲ್ಲಿ ನಮ್ಮ ದೇಶದ ಬಗ್ಗೆ ಗೌರವ ಮೂಡಿಸುವಂತೆ ಮಾಡಬಲ್ಲರು,” ಎಂದು ತಿಳಿಸಿದರು.
ಕಾಲೇಜಿನ ನಿರ್ದೇಶಕಿ ಶ್ರೀಮತಿ ಅರ್ಪಿತಾ ಡಿ.ವಿ, ವ್ಯವಸ್ಥಾಪಕ ನಿರ್ದೇಶಕ ಧರ್ಮವೀರ್ ಎಂ ಎಸ್, ಕಾಲೇಜಿನ ಪ್ರಾಂಶುಪಾಲರಾದ ಜಿ ಜೈಸನ್, ಬಾಣಸಿಗರಾದ ಸತೀಶ್ ನಾಗರಾಜ್, ಭರತ್ ಭೂಷಣ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.