ನೀವೇ ಉದ್ಯೋಗ ಸೃಷ್ಟಿ ಮಾಡುವ ಹಾಗೆ ಬೆಳೆಯಿರಿ : ಡಾ ಉತ್ಸವ್ ಅಗರ್ವಾಲ್.
ನಂಜನಗೂಡು : ಮುಂದುವರೆಯುತ್ತಿರುವ ತಂತ್ರಜ್ಞಾನದ ಹಾವಳಿಯಿಂದ ಸರ್ಕಾರಗಳು ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಾಗುವುದಿಲ್ಲ ಆದರೆ ನಾವೇ ಇತರರಿಗೆ ಉದ್ಯೋಗ ಸೃಷ್ಟಿ ಮಾಡಿಕೊಡುವ ಹಾಗೆ ಬೆಳೆಯ ಬೇಕು ಎಂದು ಭೋರುಕ ಫ್ಯಾಬ್ಕಾನ್ಸ್ ಪ್ರವೇಟ್ ಲಿಮಿಟೆಡ್ ನ ಅಧ್ಯಕ್ಷ ಡಾ ಉತ್ಸವ ಅಗರ್ವಾಲ್ ಹೇಳಿದರು. ತಾಲ್ಲೂಕಿನ ತಾಂಡವಪುರದ ಎಂ ಐ ಟಿ ತಾಂತ್ರಿಕ ಮಹಾ ವಿದ್ಯಾನಿಲಯದ ಆವರಣದಲ್ಲಿ ಶನಿವಾರ ಪ್ರಥಮ ವರ್ಷದ ತಾಂತ್ರಿಕ ಕಾಲೇಜಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಸ್ವಾಗತಿಸುವ ‘ ಅರಂಭ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. …