
ಮೈಸೂರು; ಮೈಸೂರು ಮಹಾನಗರಕ್ರೀಡಾ ಭಾರತಿ ಹಾಗೂ ಬಿ.ಎಸ್.ಎಸ್. ವಿದ್ಯೋದಯ ಜಂಟಿಯಾಗಿ ಆಯೋಜಿಸಿದ್ದ ‘ಮೈಸೂರು ಮಹಾನಗರಜೂನಿಯರ್ ಬ್ಯಾಂಡ್ ಸ್ಪರ್ಧೆ’ಯಲ್ಲಿ ಸರಸ್ವತಿಪುರಂನ ವಿಜಯ ವಿಠ್ಠಲ ವಿದ್ಯಾಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಸ್ಪರ್ಧೆಯಲ್ಲಿ ಅತ್ಯುತ್ತಮ ಸಂಗೀತ ಪ್ರತಿಭೆ, ಶಿಸ್ತು, ಸಮನ್ವಯತೆ ಮತ್ತುತಂಡದ ಭಾವನೆಯನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳು ತೀರ್ಪುಗಾರರು ಹಾಗೂ ಆಯೋಜಕರಿಂದ ಮೆಚ್ಚುಗೆ ಪಡೆದರು.