
ಮೈಸೂರು; ನಗರದ ಸರಸ್ವತಿಪುರಂನಲ್ಲಿರುವ ಕೃಷ್ಣಧಾಮ ಸಭಾಂಗಣದಲ್ಲಿ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ 35ನೇ ಚಾತುರ್ಮಾಸ್ಯವ್ರತ ಅಂಗವಾಗಿ ಮೈಸೂರಿನ ಶ್ರೀರಾಗ ಕಲಾತಂಡದ ವಿದೂಷಿಕುಮಾರಿ ಕಾವ್ಯಶ್ರೀ ಆರ್ರಾವ್ರವರಿಂದ ಸುಪ್ರಸಿದ್ಧ ದಾಸರ ಕೀರ್ತನೆಗಳ ಗಾಯನ ಸುಧೆ ಹರಿಯಿತು. ಮುರುಳಿಬಾರಿಸೋಮಾಧವ, ನಮ್ಮಮ್ಮ ಶಾರದೆ, ಚಂದ್ರಚೂಢಶಿವಶAಕರ, ಕೃಷ್ಣಬಾರೋ ಗೀತೆಗಳನ್ನು ಹಾಡಿದರು. ಪಕವಾದ್ಯ ಸಹಕಾರ ವಿದ್ವಾನ್ಗಣೇಶ್ಭಟ್, ಕೀಬೋರ್ಡ್ ವಿದ್ವಾನ್ ಭೀಮಶಂಕರ್ತಬಲ ಸಹಕಾರ ನೀಡಿದರು.