Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸಡಗರದಿಂದ ನಡೆದ ಶ್ರೀ ಸುಜ್ಞಾನೇಂದ್ರ ತೀರ್ಥರ ಆರಾಧನಾ ಮಹೋತ್ಸವ


ಮೈಸೂರು; ಶ್ರೀ ಸುಜ್ಞಾನೇಂದ್ರ ತೀರ್ಥರ ಆರಾಧನಾ ಮಹೋತ್ಸವ ನಗರದ ಸುಬ್ಬರಾಯನಕೆರೆ ಮಠದಲ್ಲಿ ಅದ್ದೂರಿಯಾಗಿ ನೆರವೇರಿತು.
ಮಠದಲ್ಲಿ ಶ್ರೀ ಸುಜ್ಞಾನೇಂದ್ರ ತೀರ್ಥರ ಆರಾಧನೆಯ ಪ್ರಯುಕ್ತ ರಾಯರ ಪೂಜೆ, ಉತ್ಸವ, ಅಭಿಷೇಕ ಮತ್ತು ಹಸ್ತೋದಕ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ಸಂಗೋಪಾAಗವಾಗಿ ನೆರವೇರಿದವು.
ಈ ಸಂದರ್ಭದಲ್ಲಿ ವಿದೂಷಿ ಡಾ. ಎನ್.ಎಸ್.ಲಕ್ಷಿ÷್ಮಯವರ ನೃತ್ಯಾನ್ವೇಷಣ ನೃತ್ಯಶಾಲೆಯ ವಿದ್ಯಾರ್ಥಿಗಳು ವಿಶೇಷ ನೃತ್ಯ ಪ್ರದರ್ಶನ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಶ್ರೀರಾಘವೇಂದ್ರ ಸ್ವಾಮಿಗಳು ಮತ್ತು ಅವರ ತತ್ತ÷್ವಗಳ ಆಧಾರಿತ ನೃತ್ಯರೂಪಕಗಳು ಹಾಗೂ ಶ್ರೀ ಸೀತಾರಾಮ ಕಲ್ಯಾಣ, ವೆಂಕಟೇಶ್ವರ ಸ್ತುತಿ ಸೇರಿದಂತೆ ಅನೇಕ ನೃತ್ಯರೂಪಕಗಳನ್ನು ಪ್ರಸ್ತುತ ಪಡಿಸಿಸಿದರು. 2-3 ವರ್ಷದ ಪುಟ್ಟ ಮಕ್ಕಳು ನೃತ್ಯ ಪ್ರದರ್ಶನ ಮಾಡಿದ್ದು ವಿಶೇಷ.
ನೆರೆದಿದ್ದ ಭಕ್ತರು ಈ ನೃತ್ಯ ವೈಭೋಗವನ್ನು ವೀಕ್ಷಿಸಿ ಹರ್ಷೋದ್ಗಾರ ವ್ಯಕ್ತಪಡಿಸಿದರು.