
ಬೆಂಗಳೂರು: ಪ್ರತಿ ದಿನ ಸಂಜೆ 7 ಗಂಟೆಯಾದರೆ ಸಾಕು ಇವಳೇ ಭಾಗ್ಯಲಕ್ಷಿö್ಮ ಎಂದು ಎಚಿಟ್ರೀಯಾಗಿ ನೋಡುಗರ ಕಣ್ಣಿನಲ್ಲಿ ಕಣ್ಣೀರಿನ ಕೋಡಿ ಹರಿಸಿ, ಕರುಳು ಹಿಂಡುವAತೆ ಮಾಡುತ್ತಿದ್ದ
ಸಾವಿರಕ್ಕೂ ಹೆಚ್ಚಿನ ಸಂಚಿಕೆಗಳನ್ನು ಪೂರ್ಣಗೊಳಿಸಿ, ವೀಕ್ಷಕರನ್ನು ಸತತವಾಗಿ ಸೆಳೆದಿದ್ದ ‘ಕಲರ್ಸ್ ಕನ್ನಡ’ದ ಜನಪ್ರಿಯ ಸೀರಿಯಲ್ ‘ಭಾಗ್ಯಲಕ್ಷಿ÷್ಮ’ ಸೀರಿಯಲ್ ಇದೀಗ ಮುಕ್ತಾಯದ ಅಂತಿಮ ಘಟ್ಟಕ್ಕೆ ಬಂದಿದೆ.
ಇದೇ ವಾರ ವೀಕ್ಷಕರ ಮೆಚ್ಚಿನ ‘ಭಾಗ್ಯಲಕ್ಷಿ÷್ಮÃ’ ಮುಕ್ತಾಯವಾಗಲಿದೆ. ಈ ಕುರಿತ ಅಂತಿಮ ಸಂಚಿಕೆಗಳ ಪ್ರೋಮೊವನ್ನು ಈಗಾಗಲೇ ವಾಹಿನಿ ಪ್ರಸಾರ ಮಾಡುತ್ತಿದೆ. ಈ ಧಾರಾವಾಹಿ ಶುರುವಾಗಿ ಮೂರವರೇ ವರ್ಷ ಕಳೆದಿದೆ. ಸುದೀರ್ಘ ಹಾಗೂ ಯಶಸ್ವಿ ಪಯಣವನ್ನು ಇದೀಗ ಮುಕ್ತಾಯಗೊಳಿಸಲು ಸಜ್ಜಾಗಿದೆ.
ಕರುನಾಡಿನ ಮನೆ ಮನದ ‘ಭಾಗ್ಯಲಕ್ಷಿ÷್ಮÃ’ ತನ್ನೆಲ್ಲ ಸಂಕಷ್ಟ – ಸವಾಲುಗಳನ್ನು ಮೆಟ್ಟಿನಿಂತು ನೆಮ್ಮದಿಯ ನಿಟ್ಟುಸಿರು ಬಿಡಲಿದ್ದಾರೆ.
‘ಭಾಗ್ಯಲಕ್ಷಿ÷್ಮ’ ಕೇವಲ ಮನರಂಜನೆಯ ಧಾರಾವಾಹಿಯಾಗದೆ ಅದೆಷ್ಟೋ ಗೃಹಿಣಿಯರಿಗೆ ಸ್ಪೂರ್ತಿಯಾಗಿ, ದಿಟ್ಟತನವನ್ನು ಸಾರಲು ಮಾದರಿಯಾಗಿ ಮೂಡಿಬಂದಿತ್ತು. ಭಾಗ್ಯ’ ಕ್ಯಾರೆಕ್ಟರ್ ಮಾಡಿದ್ದ ಸುಷ್ಮಾ ಅವರು ಈ ಧಾರಾವಾಹಿ ಮೂಲಕ ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು. ಅವರನ್ನು ಕರುನಾಡಿನ ಹೆಣ್ಮಕ್ಕಳು ಮನೆ ಮಗಳಂತೆ ಪ್ರೀತಿ – ಪ್ರೋತ್ಸಾಹವನ್ನು ನೀಡಿದ್ದಾರೆ.
ಅಂತಿಮ ಸಂಚಿಕೆಗಳಲ್ಲಿ ಭಾಗ್ಯ ಗಂಡನ ಮನೆಯ ಮೆಚ್ಚುಗೆಯನ್ನು ಗಳಿಸುವುದರ ಬಗ್ಗೆ ದಾರಿ ತಪ್ಪಿರುವ ಕನ್ನಿಕಾಳ ಜೀವನ ಸರಿದಾರಿಗೆ ತರುವ ಕುರಿತು ಇರಲಿದೆ.
ಅಂತೂ ಸಾಲು ಸಾಲು ಸವಾಲುಗಳನ್ನು ಎದುರಿಸಿದ್ದ ‘ಭಾಗ್ಯ’ಳ ಬದುಕು ಈಗ ಸಾರ್ಥಕತೆಯ ಹಾದಿಯತ್ತ ಸಾಗಲಿದೆ.
ಮೂಲಗಳ ಪ್ರಕಾರ ಜೂನ್ 7ಕ್ಕೆ ‘ಭಾಗ್ಯಲಕ್ಷಿ÷್ಮÃ’ ಕೊನೆಯ ಸಂಚಿಕೆ ಪ್ರಸಾರವಾಗಲಿದೆ. ಸೀರಿಯಲ್ನ ನಾಯಕಿ ಸುಷ್ಮಾ ಕೆ. ರಾವ್ ಅವರು ಮುಂದೆ ‘ಕ್ವಾಟ್ಲಿ ಕಿಚನ್’ ಎಂಬ ಹೊಸ ರಿಯಾಲಿಟಿ ಶೋನ ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಸೀರಿಯಲ್ ಜಾಗಕ್ಕೆ ‘ಅಗ್ನಿಸಾಕ್ಷಿ’ ಜೂನ್ 8 ರಿಂದ ಪ್ರತಿದಿನ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.