3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನಟನ’ದಲ್ಲಿ‘ಅವಲೋಕನ’ ಕಲಾ ಚಲನಚಿತ್ರ ಪ್ರದರ್ಶನ


ಮೈಸೂರು; ಇಲ್ಲಿನ ನಟನರಂಗಶಾಲೆಯು ಜೂನ್ 07ರಂದು ಸಂಜೆ 06.30ಕ್ಕೆ ರಾಮಕೃಷ್ಣ ನಗರದಲ್ಲಿರುವ ನಟನರಂಗಶಾಲೆಯಲ್ಲಿ ಅಶಿರ ಎಂಟರ್‌ಟೈನ್‌ಮೆAಟ್ ನಿರ್ಮಿಸಿದ ಕಲಾ ಚಲನಚಿತ್ರ ‘ಅವಲೋಕನ’ ಪ್ರದರ್ಶನಗೊಳ್ಳಲಿದೆ. ವಿಶಾಲ್‌ಕಂಪ್ಲಿ ಮದನಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು ಮಂಡ್ಯರಮೇಶ್ ಅವರ ನಟನರಂಗಶಾಲೆಯ ಅನೇಕ ಕಲಾವಿದರು ಈ ಚಲನಚಿತ್ರದಲ್ಲಿ ನಟಿಸಿದ್ದಾರೆ.
ಇದು ಆಧ್ಯಾತ್ಮಿಕ ಮತ್ತು ನೈತಿಕ ಗುಣಗಳನ್ನು ಹೊಂದಿರುವ ಕಾರ್ಯ ನಿರತ ಪ್ರಯಾಣದ ಚಲನಚಿತ್ರವಾಗಿದ್ದು, ಅರಿಷಡ್ವರ್ಗಗಳ ಸುತ್ತ ಸುತ್ತುತ್ತದೆ ಮತ್ತು ಪ್ರಾಯೋಗಿಕ ನೈಜಜಗತ್ತಿನಲ್ಲಿ ಅನುಭವಗಳ ಮೂಲಕ ಕಲಿತ ಪಾಠಗಳಿಂದ ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತುಕೊಳ್ಳಲು ವ್ಯಕ್ತಿಯು ತನ್ನೊಳಗೆ ಒಳಗಾಗುವ ಅರಿವಿನ ರೂಪಾಂತರದ ಮೇಲೆ ಕೇಂದ್ರೀಕರಿಸುತ್ತದೆ.ಅAತಿಮವಾಗಿ ಈ ಚಿತ್ರದ ಮೂಲ ಸಾರಾಂಶ ಸ್ವಯಂ ಸಾಕ್ಷಾತ್ಕಾರ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 7259537777, 9480468327, 9845595505ನ್ನು ಸಂಪರ್ಕಿಸಬೇಕೆAದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.