Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸೈನಿಕ ಉದ್ಯಾನವನದಲ್ಲಿ ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ವತಿಯಿಂದ ಪರಿಸರ ದಿನಾಚರಣೆ


ಮೈಸೂರು; ನಗರದ ದಟ್ಟಗಳ್ಳಿಯಲ್ಲಿರುವ ಸೈನಿಕ ಉದ್ಯಾನವನದಲ್ಲಿ ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದ ವತಿಯಿಂದ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಉದ್ಯಾನವನ ಹಾಗೂ ಪಕ್ಕದ ರಸ್ತೆಯಲ್ಲಿ ಗಿಡಗಳನ್ನು ನೆಟ್ಟು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ “ತಾಯಿಯ ಹೆಸರಿನಲ್ಲಿ ಒಂದು ಗಿಡ” ಎಂದು ಜೂನ್ ತಿಂಗಳಿನಾದ್ಯAತ ಪ್ರತಿಯೊಬ್ಬರು ತಮ್ಮ ತಾಯಿ ಹೆಸರಿನಲ್ಲಿ ಒಂದೊAದು ಗಿಡ ನೆಟ್ಟು, ಅದನ್ನು ಪೋಷಿಸಲು ಸಂಕಲ್ಪಿಸಿದರು.
ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯೆ ಲಕ್ಷಿ÷್ಮ ಕಿರಣ್ ಮಾತನಾಡಿ “ಮನುಷ್ಯ ಪ್ರಕೃತಿ ಮೇಲೆ ಮಾಡುವ ಹಾನಿಗೆ ಹೋಲಿಸಿದರೆ ನಾವು ಪರಿಸರ ದಿನಾಚರಣೆಯಂದು ನೆಡುವ ಗಿಡಗಳ ಸಂಖ್ಯೆ ತೀರ ಕಡಿಮೆ. ಆದರೂ ಪ್ರಕೃತಿಯ ಮೇಲೆ ಪ್ರೀತಿಯಿಂದ ಮತ್ತು ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಲಭಿಸಲಿ ಎಂಬ ಉದ್ದೇಶದಿಂದ ಗಿಡಗಳನ್ನು ನೀಡುತ್ತೇವೆ. ನಾವು ನಮ್ಮ ಪರಿಸರವನ್ನು ಶುದ್ಧವಾಗಿ ಇಟ್ಟುಕೊಳ್ಳುವುದನ್ನು ಚಿಕ್ಕ ವಯಸ್ಸಿನಿಂದಲೇ ರೂಡಿಸಿಕೊಳ್ಳಬೇಕು” ಎಂಬ ಸಂದೇಶ ನೀಡಿದರು.
ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷ ರಾಕೇಶ್ ಭಟ್ ರವರು ಜಾಗೃತವಾಗಿ ಪ್ಲಾಸ್ಟಿಕ್ ಬಳಕೆ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಪ್ಲಾಸ್ಟಿಕ್ ಹಾಗೂ ಒಣಕಸವನ್ನು ಸಾರ್ವಜನಿಕ ಸ್ಥಳದಲ್ಲಿ ಎಸೆಯುವುದಿಲ್ಲ ಎಂಬುದನ್ನು ನೆರೆದಿದ್ದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ಸಂಕಲ್ಪ ಮಾಡಿಸಿದರು.
ಈ ವೇಳೆ ಬಿಜೆಪಿ ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಬಿ ಎಂ ರಘು, ಹೇಮಾ ಗಂಗಪ್ಪ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಆರ್. ಸೋಮಶೇಖರ್, ಈರೇಗೌಡ, ಮುಖಂಡರಾದ ಕಿರಣ್ ಮಾದೇಗೌಡ, ಬಸವಣ್ಣ, ಮಧು, ಮಂಡಲದ ಪದಾಧಿಕಾರಿಗಳಾದ ಹೆಚ್.ಜಿ ರಾಜಮಣಿ, ಶಿವು ಪಟೇಲ್, ಎ.ಎಂ ಗಿರೀಶ್, ಹೆಚ್.ಎಸ್ ಹಿರಿಯಣ್ಣ, ಬಿ.ಸಿ ಶಶಿಕಾಂತ್, ರಾಚಪ್ಪಾಜಿ, ಎನ್. ಶುಭಶ್ರೀ, ಕಲಾವತಿ, ವಿನುತ, ಮೋರ್ಚಾಗಳ ಪದಾಧಿಕಾರಿಗಳಾದ ನಾಗೇಶ್ ನಾಯಕ್, ಎನ್. ಪ್ರತಾಪ್, ಮಧು ಸೋಮಶೇಖರ್, ಚಂದನ್ ಗೌಡ, ಸಿ. ರಾಘವೇಂದ್ರ, ರಾಹುಲ್, ಸಂಜಯ್ ಪ್ರಸನ್ನ, ವಸುಮತಿ, ಗ್ರೀನ್ ದಟ್ಟಗಳ್ಳಿ ಫೌಂಡೇಶನ್ ನ ನಟರಾಜ್, ಮಂಜುನಾಥ್, ರಾಮಕೃಷ್ಣ ಕ್ರೀಡಾ ಮತ್ತು ಸಾಂಸ್ಕöÈತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಬಸವಲಿಂಗಪ್ಪ, ಮಹಾಲಕ್ಷಿ÷್ಮ ದೇವಸ್ಥಾನದ ಟ್ರಸ್ಟಿಗಳು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.