
ಮೈಸೂರು; ಜಾರ್ಖಂಡ್ನಲ್ಲಿ ನಡೆಯುತ್ತಿರುವ ಅಂತರಾಷ್ಟಿçÃಯ ಮಟ್ಟದ ಸೌತ್ ಏಷ್ಯನ್ ಥ್ರೋ ಬಾಲ್ ಚಾಂಪಿಯನ್ ಶಿಪ್ನಲ್ಲಿ ಭಾರತ ತಂಡಕ್ಕೆ ಮೈಸೂರಿನ ಯುವತಿ ಪೃಥ್ವಿ ಪಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಮೈಸೂರಿನ ಅಗ್ರಹಾರದ ರಾಮಾನುಜ ರಸ್ತೆಯಲ್ಲಿ ಜಯಚಾಮರಾಜೇಂದ್ರ ಯುವ ವೇದಿಕೆ ವತಿಯಿಂದ ಪೃಥ್ವಿ ಪಿ ಶೆಟ್ಟಿ ಅವರನ್ನು ಸನ್ಮಾನ ಮಾಡಿ ಶುಭ ಕೋರಲಾಯಿತು. ಈ ವೇಳೆ ಸಂಘದ ಮುಖಂಡರಾದ ರವಿಶಂಕರ್, ಗಣೇಶ್, ರಾಕೇಶ್, ರಾಜಣ್ಣ ಸೇರಿ ಹಲವರು ಉಪಸ್ಥಿತರಿದ್ದರು.