3Kaala News

ಸುಭಾಷಿತ 

ಓಟದ ಬದುಕಿನಲ್ಲಿ ಎಲ್ಲವನ್ನು ತಕ್ಷಣವೇ ಪಡೆದುಕೊಳ್ಳಬೇಕೆಂಬ ನಿನ್ನ ಹಟವೇ ನಿನ್ನ ನೆಮ್ಮದಿಯನ್ನು ಕದಿಯುತ್ತದೆ. ಸಮಯಕ್ಕಿಂತ ಮುಂಚೆ, ಹಣೆ ಬರಕಿಂತ ಮುಂಚೆ, ಹೆಚ್ಚಿಗೆ ಯಾರಿಗೂ ಏನೂ ಸಿಗುವುದಿಲ್ಲ . ನಿನ್ನ ಪ್ರಯತ್ನ ನಿರಂತರವಾಗಿರಲಿ. ಆದರೆ, ಫಲಿತಾಂಶಕ್ಕಾಗಿ ಇಂದಿನ ಶಾಂತಿಯನ್ನು ಬಲಿ ಕೊಡಬೇಡ. ಭಗವಾನ್ ಶ್ರೀ ಕೃಷ್ಣ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅಂತರರಾಷ್ಟ್ರೀಯ ಯೋಗ ದಿನ

ಅಂತರರಾಷ್ಟ್ರೀಯ ಯೋಗ ದಿನ *ಯೋಗ  ಮಾನವಕುಲಕ್ಕೆ  ಭಾರತದ ಶಾಶ್ವತ ಕೊಡುಗೆ, ಪ್ರಾಚೀನ ಜ್ಞಾನದಿಂದ ಜಾಗತಿಕ ಆರೋಗ್ಯದತ್ತ* ಸಂದೇಶ; ಅಂತರರಾಷ್ಟ್ರೀಯ ಯೋಗ ದಿನವು ಕೇವಲ ವಾರ್ಷಿಕ ಆಚರಣೆಯಲ್ಲ; ಇದು ಭಾರತದ ಪ್ರಾಚೀನ ಜ್ಞಾನವನ್ನು ಹಾಗೂ ಅದರ ಆಧುನಿಕ ಜೀವನದಲ್ಲಿನ ಶಾಶ್ವತ ಪ್ರಸ್ತುತತೆಯನ್ನು ಸಂಭ್ರಮಿಸುವ ಜಾಗತಿಕ ಚಳವಳಿಯಾಗಿದೆ. ಸಾವಿರಾರು ವರ್ಷಗಳಿಂದ ಸಮಗ್ರ ಆರೋಗ್ಯ ಮತ್ತು ಕಲ್ಯಾಣವನ್ನು ಪೋಷಿಸಿರುವ ಭಾರತೀಯ ನಾಗರಿಕತೆಯ ಬೇರುಗಳಿಂದ ಬೆಳೆಯುತ್ತಿರುವ ಯೋಗವು ಇಂದು ದೈಹಿಕ ಆರೋಗ್ಯ, ಮಾನಸಿಕ ಸಮತೋಲನ, ಭಾವನಾತ್ಮಕ ಸ್ಥೈರ್ಯ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಸಂಪರ್ಕಿಸುವ…

Read More

ಜೂನ್ 21ರಾಮಸಮುದ್ರದಲ್ಲಿ ಧಾರ್ಮಿಕ ಪೂಜೆ. ಬೆಳ್ಳಿ ಕಂಡಾಯ. ಪುಟಾಣಿ ಮಕ್ಕಳ ಹಾಲುರವೆ ಮೆರವಣಿಗೆ

ವರದಿ ಜಿ ಬಂಗಾರುಚಾಮರಾಜನಗರ. ಜೂನ್ 20; ರಾಮಸಮುದ್ರದ ನಾಯಕರ ಬಡಾವಣೆಯಲ್ಲಿಶ್ರೀ ಆಂಜನೇಯಸ್ವಾಮಿ, ಶ್ರೀ ಮಹರ್ಷಿ ವಾಲ್ಮೀಕಿ,ರಾಜವೀರ ಮದಕರಿನಾಯಕ ಪುತ್ಥಳಿಗಳು ಮತ್ತು ನೂತನವಾಗಿ ನಿರ್ಮಿಸಿರುವ ಮಹಾದ್ವಾರ ಉದ್ಘಾಟನೆ ಪೂಜಾ. ಹೋಮ ಪುಟಾಣಿ ಮಕ್ಕಳ ಹಾಲುರವೆ ಮಂಟೆಸ್ವಾಮಿ ದೇವರ ಮೆರವಣಿಗೆಮಹೋತ್ಸವದದಿನಾಂಕ 21.6,2026 ಭಾನುವಾರ ಬೆಳಿಗ್ಗೆ 4. 15, ರಿಂದ 5.45, ಹೋಮ , ನಡೆಯಲಿದೆ.5,45, ಗೋಪೂಜೆ. 6,15. ಊರಿನ ಪ್ರಮುಖ ಬೀದಿಗಳಲ್ಲಿ ಪುಟಾಣಿ ಮಕ್ಕಳ ಹಾಲರವೆ, ಹಾಗೂ ಬೆಳ್ಳಿ ಕಂಡಾಯ. ಮಂಟೇಸ್ವಾಮಿ ದೇವರ ಉತ್ಸವ ಮೆರವಣಿಗೆ. ರಾಮ ಸಮುದ್ರದ ಸುಭದಾರ್…

Read More

ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯಗಳ ಕಾಮಗಾರಿಗಳ ಕೆಲಸಗಳನ್ನು ಚುರುಕುಗೊಳಿಸಿ: ಲಕ್ಷ್ಮಿಕಾಂತರೆಡ್ಡಿ ಜಿ

ಮೈಸೂರು: ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಶೇ 80 ರಷ್ಟು ಅನುದಾನ ಬಿಡುಗಡೆಯಾಗಿರುತ್ತದೆ. ಕೆಲಸ ಚುರುಕುಗೊಳಿಸಿ ಕಾಮಗಾರಿ ಪ್ರಾರಂಭಿಸುವಂತೆ ಜಿಲ್ಲಾದಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಿದರು.ಶನಿವಾರ ನಗರದ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆದ ಮುಖ್ಯಮಂತ್ರಿಗಳ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಈಗಾಗಲೇ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ಬಳಸಿಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸದಿದ್ದಲ್ಲಿ ಹೊಸದಾಗಿ ಅನುದಾನ ನೀಡುವುದಿಲ್ಲ. ಅನುಷ್ಠಾನ ಇಂಜಿನಿಯರಿಂಗ್ ಇಲಾಖೆಗಳು ಕಾಮಗಾರಿಗಳ ಬಗ್ಗೆ ಹೆಚ್ಚಿನ ನಿಗಾ…

Read More

ಸಿಕಲ್ ಸೆಲ್ ಅನಿಮಿಯಾ ಸ್ಕ್ರೀನಿಂಗ್ ನಲ್ಲಿ ಜಿಲ್ಲೆಯಲ್ಲಿ ಶೇ ನೂರರಷ್ಟು ಸಾಧನೆ ; ಡಿಎಚ್‍ಒ ಡಾ. ಪಿ ಸಿ ಕುಮಾರ್ ಸ್ವಾಮಿ

ಮೈಸೂರು; ಜಿಲ್ಲೆಯಲ್ಲಿ ಸಿಕಲ್ ಸೆಲ್ ಅನಿಮಿಯಾ ಸ್ಕ್ರೀನಿಂಗ್‍ನಲ್ಲಿ ಶೇಕಡಾ 100 ರಷ್ಟು ಪ್ರಗತಿ ಆಗಿದ್ದು, ಇದು ಹೆಮ್ಮೆಯ ವಿಷಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕುಮಾರ್ ಸ್ವಾಮಿ ಪಿ ಸಿ ಅವರು ತಿಳಿಸಿದರು.ಶನಿವಾರ ನಗರದ ಜಿಲ್ಲಾ ಪಂಚಾಯತ್ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸಿಕಲ್ ಸೆಲ್ ಅನಿಮಿಯಾ ದಿನ ಹಾಗೂ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಮೂರು ವರ್ಷದಿಂದ ಸಿಕಲ್ ಸೆಲ್ ಅನಿಮಿಯಾ…

Read More

ಈ ಬಾರಿ ನಾಡ ಹಬ್ಬ ಮೈಸೂರು ದಸರಾದಲ್ಲಿ ಕಂಬಳ ವಿಶೇಷ ಆಕರ್ಷಣೆ: ಲಕ್ಷ್ಮಿಕಾಂತ ರೆಡ್ಡಿ ಜಿ

ಮೈಸೂರು: ಇದೇ ಮೊದಲ ಬಾರಿಗೆ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ-2026 ರಲ್ಲಿ ಕಂಬಳ ಕಾರ್ಯಕ್ರಮವನ್ನು ವಿಶೇಷ ಆಕರ್ಷಣೆಯಾಗಿ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ ತಿಳಿಸಿದರು.ಶನಿವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಂಬಳ ಆಯೋಜನೆಯ ಬಗ್ಗೆ ಸಿದ್ಧತಾ ಸಭೆ ನಡೆಸಿ ಮಾತನಾಡಿz ಅವÀರು, ಕಳೆದ ವರ್ಷವೇ ದಸರಾದಲ್ಲಿ ಕಂಬಳ ಆಯೋಜಿಸಲು ಉದ್ದೇಶಿಸಲಾಗಿತ್ತು, ಆದರೆ ಸರಿಯಾದ ಸ್ಥಳ ದೊರಕದ ಹಿನ್ನಲೆಯಲ್ಲಿ ಸಾಧ್ಯವಾಗಲಿಲ್ಲ ಎಂದರು.ಈ ಬಾರಿ 3 ತಿಂಗಳ ಮೊದಲೇ ಕಂಬಳ ಆಯೋಜಿಸಲು ಮೈಸೂರು ನಗರದ…

Read More

ಆಗಸ್ತ್ಯ ಗುರುಕುಲ ಆಶ್ರಮದಲ್ಲಿ ಯೋಗ ಕಾರ್ಯಗಾರ

ಮೈಸೂರು; 12 ನೇಯ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪೂರ್ವಭಾವಿ ಯಾಗಿ ಆಗಸ್ತ್ಯ ಗುರುಕುಲ ಆಶ್ರಮದಲ್ಲಿ ಹಾಗೂ ವಿದ್ಯಾರಣ್ಯಪ್ಯರಂ ಶ್ರೀ ವಾಣಿ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗದ ಕಾರ್ಯಗಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೈಸೂರು ಯೋಗೀಸ್ ಟ್ರಸ್ಟ್ ನ ಸಂಸ್ಥಾಪಕ ಅz ಮಹತ್ವ sÀ್ಯಕ್ಷ ಯೋಗ ಪ್ರಕಾಶ್, ಮುಕುಂದನ್ ಹಾಗೂ ಅಗಸ್ತ್ಯ ಗುರುಕುಲ ಆಶ್ರಮದ ಮುಖ್ಯಸ್ಥರಾದ ಭಾಗ್ಯಲಕ್ಷ್ಮಿ ಇನ್ನಿತರ ಶಿಬಿರರ್ಥಿಗಳು ಭಾಗವಹಿಸಿದ್ದರು.

Read More

ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಅಡ್ಡಮತದಾನ ಪ್ರಕರಣವನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ; ಸಂಸದ ಯದುವೀರ್

ಮೈಸೂರು:ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಅಡ್ಡಮತದಾನ ಪ್ರಕರಣವನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ಶನಿವಾರ ಮೈಸೂರಿನ ಚಾಮರಾಜಪುರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಶಾಸಕರ ಅಡ್ಡ ಮತದಾನಕ್ಕೂಪಕ್ಷದ ನಾಯಕತ್ವಕ್ಕೂ ಯಾವುದೇ ಸಂಬಂಧವಿಲ್ಲ. ಈ ಬೆಳವಣಿಗೆಯು ನಾಯಕತ್ವದ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಜೆಡಿಎಸ್-ಬಿಜೆಪಿ ಮೈತ್ರಿ ಮೇಲೂ ಕೆಟ್ಟ ಪರಿಣಾಮ ಉಂಟಾಗುವುದಿಲ್ಲ’ ಎಂದು ಹೇಳಿದರು.ಇಡೀ ಪ್ರಕರಣವನ್ನು ಪಕ್ಷ ಗಂಭೀರವಾಗಿ ತೆಗೆದುಕೊಂಡಿದೆ. ಅಡ್ಡಮತದಾನ ಮಾಡಿದವರನ್ನು ಪತ್ತೆ ಹಚ್ಚುತ್ತೇವೆ….

Read More

ವಿಧಾನಪರಿಷತ್ ಚುನಾವಣೆಯಲ್ಲಿ ನಾನು ಚಲಾಯಿಸಿದ ಮತ ಅಸಿಂಧು ಆಗಿಲ್ಲ; ಶಾಸಕ ಟಿ.ಎಸ್.ಶ್ರೀವತ್ಸ

ಮೈಸೂರು: ವಿಧಾನಪರಿಷತ್ ಚುನಾವಣೆಯಲ್ಲಿ ನಾನು ಚಲಾಯಿಸಿದ ಮತ ಅಸಿಂಧು ಆಗಿಲ್ಲ. ನಾನು ಮತ ಚಲಾಯಿಸದಷ್ಟು ಅಪ್ರಬುದ್ಧನಲ್ಲ, ಈ ಬಗ್ಗೆ ಸತ್ಯ ಶೋಧನ ಸಮಿತಿಯಿಂದ ಬಹಿರಂಗವಾಗಲಿದೆ ಎಂದು ಮೈಸೂರಿನ ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.ಶನಿವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್ ಚುನಾವಣೆಯಲ್ಲಿ ನಾನು ಚಲಾಯಿಸಿದ ಮತ ಅಸಿಂಧು ಆಗಿದೆ ಎಂದು ಯಾರೋ ಸುಳ್ಳು ವದಂತಿ ಹಬ್ಬಿಸಿದ್ದಾರೆ. ಇದೊಂದು ವ್ಯವಸ್ಥಿತ ಷಡ್ಯಂತ್ರ. ನಾನು ಮತ ಚಲಾಯಿಸಲು ಆಗದಷ್ಟು ಅಪ್ರಬುದ್ಧನಲ್ಲ. ನಾನು ವಿವೇಚನೆಯಿಂದ ಮತ…

Read More

ಆರೋಗ್ಯವಂತ ಪ್ರಜೆಗಳಾಗಬೇಕಾದರೆ ಪ್ರತಿಯೊಬ್ಬರು ಪ್ರತಿದಿನ ಯೋಗಾಸನ ಪ್ರಾಣಾಯಾಮ ಧ್ಯಾನ ಮಾಡಬೇಕಾಗಿದೆ; ಡಾ.ಎ. ಎಸ್ ಚಂದ್ರಶೇಖರ್

ಮೈಸೂರು; ನಗರದ ಹೂಟಗಳ್ಳಿಯಲ್ಲಿರುವ ಶ್ರೀ ಪರಮಹಂಸ ಯೋಗ ಶಿಕ್ಷಣ ಮಂದಿರದಲ್ಲಿ ಶನಿವಾರ ಬೆಳಿಗ್ಗೆ 12ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಡಾ.ಎ. ಎಸ್ ಚಂದ್ರಶೇಖರ್ ಮಾತನಾಡಿ, ಇಂದು ಕಲುಷಿತವಾಗಿರುವ ವಾತಾವರಣದಲ್ಲಿ ನಾವೆಲ್ಲರೂ ವಾಸಿಸುತ್ತಿದ್ದೇವೆ. ಆರೋಗ್ಯವಂತ ಪ್ರಜೆಗಳಾಗಬೇಕಾದರೆ ಪ್ರತಿಯೊಬ್ಬರು ಪ್ರತಿದಿನ ಯೋಗಾಸನ ಪ್ರಾಣಾಯಾಮ, ಧ್ಯಾನ ಮಾಡಬೇಕಾಗಿದೆ. ದೈಹಿಕ , ಮಾನಸಿಕ, ಆಧ್ಯಾತ್ಮಿಕ ಮತ್ತು ಭೌತಿಕ ಸಾಧನೆಗೆ ಯೋಗವು ಅತ್ಯವಶ್ಯಕ. ಆರೋಗ್ಯವಂತ ಪ್ರಜೆಗಳಾದರೆ ಆರೋಗ್ಯವಂತ ದೇಶವನ್ನು ಕಟ್ಟಬಹುದು ಎಂದು ಸಲಹೆ ನೀಡಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು…

Read More

13 ಕರ್ನಾಟಕ ಬೆಟಾಲಿಯನ್ ಎನ್‍ಸಿಸಿಯ ಸಂಯೋಜಿತ ವಾರ್ಷಿಕ ತರಬೇತಿ ಶಿಬಿರ ಸಮಾಪನ

ಮೈಸೂರು ; ಗ್ರೂಪ್ ಹೆಚ್‍ಕ್ಯೂ ಎನ್‍ಸಿಸಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ 13 ಕರ್ನಾಟಕ ಬೆಟಾಲಿಯನ ಎನ್‍ಸಿಸಿಯ ಸಂಯೋಜಿತ ವಾರ್ಷಿಕ ಥಲ್ ಸೈನಿಕ್ ಶಿಬಿರ ವನ್ನು ಮೈಸೂರಿನ ಪೆÇಲೀಸ ತರಬೇತಿ ಶಾಲೆಯಲ್ಲಿ ಜೂನ್ 11 ರಿಂದ 20 ರವರೆಗೆ ಶಿಬಿರ ಕಮಾಂಡೆಂಟ್ ಲೆಫ್ಟಿನೆಂಟ್ ಕರ್ನಲ್ ಸಂಜೀವ ಯಮನಪ್ಪ ಕೊಡತೆ ಮತ್ತು ಉಪ ಶಿಬಿರ ಕಮಾಂಡೆಂಟ್ ಲೆಫ್ಟಿನೆಂಟ್ ಕರ್ನಲ್ ಅರುಣ ಪ್ರಕಾಶ ಮೌರ್ಯ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಗೆ ಸೇರಿದ 113 ಟಿಎಸ್‍ಸಿ ಕೆಡೆಟ್‍ಗಳು ಸೇರಿದಂತೆ ಮೈಸೂರು…

Read More