Skip to main content

3Kaala News

ಸುಭಾಷಿತ 

ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.
ಇವತ್ತು ನಿನ್ನನ್ನು ಏನು ನೋಯಿಸುತ್ತಿದೆಯೋ ನಾಳೆ ಅದೇ ನಿನ್ನನ್ನು ಬಲಗೊಳಿಸುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಚಾಮುಂಡೇಶ್ವರಿಯ ದರ್ಶನಕ್ಕೆ 300 ರೂ ಟಿಕೆಟ್ ಇಲ್ಲ, 2 ಸಾವಿರ ಕೊಟ್ಟು ವಿಶೇಷ ದರ್ಶನ ಪಡೆಯಿರಿ !

ಮೈಸೂರು: ನಗರದ ಚಾಮುಂಡಿ ಬೆಟ್ಟದಲ್ಲಿ ಜುಲೈ 17 ರಿಂದ ಆಷಾಢ ಮಾಸದ ಶುಕ್ರವಾರಗಳ ವಿಶೇಷ ಪೂಜೆ ಆರಂಭವಾಗಲಿದ್ದು, ಶುಕ್ರವಾರದಿಂದ ಭಾನುವಾರದ ತನಕ ಮೂರು ದಿನಗಳ ಕಾಲ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿಷೇಧ ಮಾಡಲಾಗಿದೆ. ಆದರೆ ಬೆಟ್ಟಕ್ಕೆ ಹೋಗಲು ಭಕ್ತರಿಗೆ ವಿಶೇಷ ವಾಹನ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೇ ನಾಡ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿಯ ವಿಶೇಷ ದರ್ಶನ ಪಡೆಯುವುದಕ್ಕೆ ಬರೋಬ್ಬರಿ 2000 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ಬುಧವಾರ ಈ ಕುರಿತು ಸಚಿವ ಡಾ. ಯತೀಂದ್ರ…

Read More

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಮಾಹಿತಿ ಪಡೆದ ಸೆಲ್ವಕುಮಾರ್

ಮೈಸೂರು ; ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಪ್ರಾರಂಭಗೊAಡಿದ್ದು, ಈ ಸಂಬAಧ ಜಿಲ್ಲೆಯ ಮತದಾರರ ಪಟ್ಟಿಯ ವೀಕ್ಷಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್ ರವರು ಜಿಲ್ಲೆಗೆ ಭೇಟಿ ನೀಡಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಕಾರ್ಯದ ಪ್ರಸ್ತುತ ಹಂತದ ಗಣಿಕೆ ನಮೂನೆ ಗಳನ್ನು ಮತದಾರರಿಗೆ ಹಂಚಿಕೆ ಮಾಡುವ ಕಾರ್ಯದ ಕುರಿತು ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಹಾಗೂ ಮತದಾರರ ನೋಂದಣಾಧಿಕಾರಿಗಳಿ0ದ ಮಾಹಿತಿಯನ್ನು ಪಡೆದುಕೊಂಡರು.ಯಾವುದೇ ಅರ್ಹ ಮತದಾರರ ಮತದಾರರ ಪಟ್ಟಿಯಿಂದ ಕೈಬಿಟ್ಟುಹೋಗದಂತೆ ಎಲ್ಲಾ ಅಗತ್ಯ…

Read More

ಬಸವಣ್ಣನವರ ಸಮ ಸಮಾಜದ ನಿರ್ಮಾಣದ ಕನಸು ಇನ್ನೂ ನನಸಾಗಿಲ್ಲ; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಕಾಯಕ ಮತ್ತು ದಾಸೋಹದ ಮಹತ್ವವನ್ನು ಸಾರಿದ್ದ ಬಸವಣ್ಣನವರ ಸಮ ಸಮಾಜದ ನಿರ್ಮಾಣದ ಕನಸು ಇನ್ನೂ ನನಸಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಬುಧವಾರ ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರು ಗ್ರಾಮದಲ್ಲಿ ಶ್ರೀ ಗುರುಮಲ್ಲೇಶ್ವರ ಮಹಾ ಸಂಸ್ಥಾನ ದಾಸೋಹ ಮಠದಲ್ಲಿ ಶ್ರೀ ಗುರು ಮಲ್ಲೇಶ್ವರರ 127ನೇ ಪುಣ್ಯರಾಧನೆ ಅಂಗವಾಗಿ ನೂತನವಾಗಿ ನಿರ್ಮಿಸಿರುವ ಬಸವ ಮಹಾದ್ವಾರ ಮತ್ತು ಕಲ್ಯಾಣಿಯ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ಮತ್ತು ಅಂತಸ್ತಿನ ತಾರತಮ್ಯ ಇರಬಾರದು ಎಂದು ಬಸವಾದಿ ಶರಣರು ಕನಸು…

Read More

ಇಂಧನ ಬೆಲೆ ಇಳಿಕೆಯನ್ನು ಸ್ವಾಗತಿಸಿದ ಮೈಸೂರು ಹೋಟೆಲ್ ಮಾಲೀಕರ ಸಂಘ

ಮೈಸೂರು; ಇಂಧನ ಬೆಲೆ ಇಳಿಕೆಯಾಗಿರುವುದನ್ನು ಮೈಸೂರು ಹೋಟೆಲ್ ಮಾಲೀಕರ ಸಂಘ ಸ್ವಾಗತಿಸಿದೆ.ವಾಣಿಜ್ಯ ಅನಿಲ ಸಿಲಿಂಡರ್‌ಗಳ ಹೆಚ್ಚಿಸಿದ ಬೆಲೆಯಲ್ಲಿ 177 ರೂ ಇಳಿಸಲಾಗಿದೆ. ಯುದ್ಧದ ಪರಿಣಾಮವಾಗಿ ಕಳೆದ ನಾಲ್ಕು ತಿಂಗಳಲ್ಲಿ 19 ಕೆ.ಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು 1,500 ವರೆಗೆ ಹೆಚ್ಚಿಸಲಾಗಿತ್ತು. ಈಗ ತೈಲದ ಬ್ಯಾರೆಲ್ ಬೆಲೆ ತೀವ್ರ ಕುಸಿದಿದ್ದು, 2026 ಫೆಬ್ರವರಿ ತಿಂಗಳಿನಲ್ಲಿ ಇದ್ದ ಮೂಲ ಬೆಲೆಗೆ ಇಳಿದಿದೆ, ಐPಉ ಸಿಲಿಂಡರ್ 177 ರೂ ಮಾತ್ರ ಇಳಿಕೆಯಾಗಿದ್ದು ಇದರ ಜೊತೆ ಪೆಟ್ರೋಲ್ 5 ರೂ., ಡೀಸೆಲ್…

Read More

ಮುಚ್ಚಿದ್ದ ಮದ್ಯದಂಗಡಿ ಓಪನ್, ಕೆರಳಿದ ಗ್ರಾಮಸ್ಥರು.ಬಾರ್ ಸ್ಥಳಾಂತರಕ್ಕೆ ಶಾಸಕ ನೇತೃತ್ವದಲ್ಲೇ ಪ್ರತಿಭಟನೆ ಎಚ್ಚರಿಕೆ.

ಎಚ್.ಡಿ.ಕೋಟೆ : ತಾಲೂಕಿನ ತಾಲೂಕಿನ ಪ್ರಮುಖ ಧಾರ್ಮಿಕ ಸ್ಥಳ ಶ್ರೀ ಚಿಕ್ಕದೇವಮ್ಮ ಸನ್ನಿಧಿಯ ಹಾಲುಗಡ ಸಮೀಪದ ಗಣೇಶನ ಗುಡಿ ಬಳಿ ತೆರೆದಿರುವ ನಕಲಿ ದಾಖಲೆ ಸೃಷ್ಟಿಸಿ ತೆರೆದಿರುವ ಎಂ.ಕೆ.ಪಿ ಬಾರ್ ಅಂಡ್ ರೆಸ್ಟೋರೆಂಟನ್ನು ಕೂಡಲೇ ಸ್ಥಳಾಂತರ ಮಾಡದಿದ್ದರೇ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರ ನೇತೃತ್ವದಲ್ಲಿ ಇಟ್ನಾ ಗ್ರಾಮ ಮತ್ತು ಸುತ್ತಮುತ್ತಲ ಗ್ರಾಮಗಳ ಜನರು ಹಾಗೂ ಪ್ರಗತಿಪರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಕ್ರಮ ಎಂ.ಕೆ.ಪಿ ಬಾರ್ ಅಂಡ್ ರೆಸ್ಟೋರೆಂಟ್ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀ…

Read More

ಕಬ್ಬು ಬೆಳೆಗಾರರಿಂದ ಸಚಿವ ಯತೀಂದ್ರ ಸಿದ್ದರಾಮಯ್ಯನ ಭೇಟಿ ; ರೈತರ ಹಕ್ಕೋತ್ತಾಯಗಳನ್ನು ಈಡೇರಿಸಲು ಆಗ್ರಹ

ಮೈಸೂರು; ಇಲ್ಲಿನ ಮಹಾನಗರ ಪಾಲಿಕೆಯ ಆವರಣದಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದ ಪದಾಧಿಕಾರಿಗಳು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ರೈತರ ಹಕ್ಕೋತ್ತಾಯಗಳನ್ನು ಸಲ್ಲಿಸಿದರು.ಈ ವೇಳೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಹಳ್ಳಿ ಕೆರೆಹುಂಡಿ ಭಾಗ್ಯರಾಜ್, ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆಯನ್ನು ರೈತರ ಹಿತದೃಷ್ಟಿಯಿಂದ ಕೈಬಿಡಬೇಕು. ಇದು ರಿಯಲ್ ಎಸ್ಟೇಟ್ ಮತ್ತು ಭೂಮಿ ಖರೀದಿ ಮಾಡಿರುವ ಅನುಕೂಲವಾಗುವ ಹುನ್ನಾರವಾಗಿದೆ. ಬಿಡದಿ ಟೌನ್ ಶಿಪ್ ವ್ಯಾಪ್ತಿಯ ರೈತರ ಭೂಮಿಯನ್ನು ವಶಪಡಿಸಿಕೊಂಡರೆ, ರೈತರ ಹೆಸರಿನ ಮಾಲೀಕತ್ವದಲ್ಲಿ…

Read More

ಯುದ್ಧವಿಲ್ಲದೆ ಹೊದರೆ , ಜಗತ್ತನ್ನು ಗೆಲ್ಲುವುದಾದರೂ ಹೇಗೆ? ಸದಾ ಯುದ್ದ ನಿರತನಾಗಿ ಇಡೀ ವಿಶ್ವವನ್ನೇ ಗೆಲ್ಲಬೇಕೆಂಬ ಕೆಟ್ಟ ಗೀಳು ಅಲೆಕ್ಸಾಂಡರ್  ನಿಗೆ. ಎಲ್ಲರನ್ನೂ ಗೆಲ್ಲುವುದರಲ್ಲೇ  ಸದಾ ನಿರತನಾಗಿರುತ್ತಿದ್ದ , ಇವನಿಗೆ  ಹೇಗಾದರೂ ಮಾಡಿ, ಅದರ ಗೀಳು ಬಿಡಿಸಬೇಕೆಂದು ಡಯೋನಿಜ್ ರಿಗೆ ಅನ್ನಿಸಿತು. ಹೀಗೆ ಯಾವಾಗಲೂ ಯುದ್ಧ ಮಾಡುವುದರಿಂದ ಪ್ರತಿಯೊಂದು ಜೀವಿಗೂ ಎಷ್ಟು ತೊಂದರೆಯಾಗುತ್ತದೆ ಎಂದು  ಅವನಿಗೆ ಅರ್ಥ ಮಾಡಿಸಬೇಕೆಂಬುದು ಅವರ ಉದ್ದೇಶವಾಗಿತ್ತು.  ಜಗತ್ತನ್ನೆಲ್ಲಾ  ಗೆದ್ದು, ಅದರಿಂದ ಏನು ಮಾಡುತ್ತೀಯಾ, ಅಲೆಕ್ಸಾಂಡರ್ ಎಂದು ಅವರು ಪದೇ ಪದೇ ಕೇಳುತ್ತಿದ್ದರೂ,…

Read More

ಒಂದು ಪಕ್ಷಿ ಜೇನು ಹುಳುವನ್ನು ಕೇಳಿತು..

“ತುಂಬಾ ಕಷ್ಟ ಪಟ್ಟು ನೀನು ಜೇನಿನ ಗೂಡನ್ನು ಕಟ್ಟುತ್ತೀಯಾ, ಆದರೆ ಈ ಜನರು ನೀನು ಕಷ್ಟಪಟ್ಟು ಕಟ್ಟಿದ ಜೇನನ್ನು ಕದಿಯುತ್ತಾರೆ, ನಿನಗೆ ಇದರಿಂದ ಬೇಸರ ಆಗುವುದಿಲ್ವ..??” ಜೇನು ಹುಳು ಹೇಳಿತು :- “ಇಲ್ಲ…! ಜನರು ನನ್ನ ಜೇನನ್ನ ಕದಿಯಬಹುದು, ಆದರೆ ಯಾರೋಬ್ಬರು ನಾನು ಜೇನು ತಯಾರಿಸುವ ಕಲೆಯನ್ನು ಕಲಿಯಲು ಸಾಧ್ಯವಿಲ್ಲ.” “ಸ್ವಾರ್ಥಿಯಾಗಿ ಬದುಕುವುದು ಜೀವನದ ಭಾಗ; ಬೇರೆಯವರಿಗಾಗಿ ಬದುಕುವುದು ಜೀವನದ ಕಲೆ

Read More

ಕವಿ ಯಾವುದೇ ಒಂದು ಧರ್ಮವನ್ನು ವೈಭವೀಕರಿಸದೆ ಸಾಹಿತ್ಯ ಕೃಷಿ ಮಾಡಬೇಕು; ಮಡ್ಡೀಕೆರೆ ಗೋಪಾಲ್

ಮೈಸೂರು : ಒಬ್ಬ ಉತ್ತಮ ಕವಿಗೆ ಜಾತಿ, ಧರ್ಮದ, ಭಾಷೆಯ ಗಡಿಗಳು ಇರುವುದಿಲ್ಲ. ಆದ್ದರಿಂದ, ಕವಿ ಯಾವುದೇ ಒಂದು ಧರ್ಮವನ್ನು ವೈಭವೀಕರಿಸದೆ ಸಾಹಿತ್ಯ ಕೃಷಿ ಮಾಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹೇಳಿದರುಸಿರಿಗನ್ನಡ ವೇದಿಕೆಯ ಮೈಸೂರು ನಗರ ಘಟಕ ಹಾಗೂ ಖುಷಿ ಪ್ರಕಾಶನದ ವತಿಯಿಂದ ಮೈಸೂರಿನ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಕವಿ ಆದಿಲ್ ಪಾಷ ಅವರ ‘ನೀ ನನ್ನ ಚೈತ್ರ’, ‘ಹರ್ಷೋತ್ಸವ’ ಹಾಗೂ ‘ಆದಿರಾಗ’ ಕವನ ಸಂಕಲನಗಳನ್ನು…

Read More

ಕಲಾವಿದರು ಕಲೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನೈಜ ಸೈನಿಕರು : ಪ್ರೊ. ಕೆ. ರಾಮಕೃಷ್ಣಯ್ಯ

ಮೈಸೂರು; ಒಂದು ರಾಷ್ಟçದ ಗಡಿಯನ್ನು ಕಾಯುವ ಸೈನಿಕರು ಎಷ್ಟು ಮುಖ್ಯವೋ, ಈ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸೈನಿಕರಾಗಿ ಯುವ ಕಲಾವಿದರು ಅಷ್ಟೇ ಮುಖ್ಯವಾದ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಕೆ. ರಾಮಕೃಷ್ಣಯ್ಯ ಹೇಳಿದರು.ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರ ಸಹಯೋಗದಲ್ಲಿ ಕೆ.ಎಸ್.ಜಿ.ಎಚ್…

Read More