
ಮೈಸೂರು: ವಯೋ ಸಹಜ ಅನಾರೋಗ್ಯದಿಂದ ನಿಧನರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡರಿಗೆ ಜೆಡಿಎಸ್ನಿಂದ ಮೆಣದ ಬತ್ತಿ ಹತ್ತಿಸಿ ಸಂತಾಪ ಸೂಚಿಸಲಾಯಿತು.
ನಗರದ ಚಾಮುಂಡಿ ಬೆಟ್ಟದ ಪಾದದಲ್ಲಿ ಚೆನ್ನಮ್ಮ ದೇವೇಗೌಡ ರ ಭಾವಚಿತ್ರ ಹಿಡಿದು ಮೇಣದಬತ್ತಿ ಬೆಳಗಿಸಿದ ಮುಖಂಡರು ಸಂತಾಪ ಸಲ್ಲಿಸಿದರು.
ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ನಗರ ಉಪಾಧ್ಯಕ್ಷ ಯದುನಂದನ್, ವೆಂಕಟೇಶ್, ಮಂಜು ಗೌಡ, ಯೋಗಾನಂದ, ಮಹೇಶ್, ಶ್ರೀಕಾಂತ್ ಕಶ್ಯಪ್, ಸ್ವಾಮಿ, ಚಂದ್ರು, ಕುಮಾರ್ ಹಾಗೂ ಇನ್ನಿತರರು ಹಾಜರಿದ್ದರು.