
ನಂಜನಗೂಡು; ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಹಾಗೂ ಶ್ರೀ ಕಂಠೇಶ್ವರ ಸ್ವಾಮಿ ದೇವಸ್ಥಾನ ನಂಜನಗೂಡು ಇವರ ಸಂಯುಕ್ತಾಶ್ರಯದಲ್ಲಿ ನಂಜನಗೂಡಿನ ಶ್ರೀಶ್ರೀ ಕಂಠೇಶ್ವರ ದೇವಸ್ಥಾನದ ದೇವಸ್ಥಾನದ ಆವರಣದಲ್ಲಿ ಕಲಾ ನಡಿಗೆ ನಿಮ್ಮ ಕಡೆಗೆ ಎಂಬ ವಿಶೇಷ ಸಾಂಸ್ಕöÈತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮೈಸೂರು ಗಾಯಕರಾದ ಅಮ್ಮ ರಾಮಚಂದ್ರ ಮತ್ತು ತಂಡವು ದೇವಸ್ಥಾನ ಆವರಣದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಸಂಗೀತದ ಹಿಂಪಿನ ಮೂಲಕ ಕಾರ್ಯಕ್ರಮಕ್ಕೆ ಮೆರಗನು ನೀಡಿತ್ತು. ಹಾಗೂ ಮೈಸೂರು ಚಾಮರಾಜನಗರ ಭಾಗದ ವಿಶೇಷ ಕಲೆಯಾಗದ ಕಂಸಾಳೆ ಕಲೆಯನ್ನು ಪುಟ್ಟಮಾದನಾಯಕ ಮತ್ತು ತಂಡವು ದೇವಸ್ಥಾನದ ಆವರಣದಲ್ಲಿ ಪ್ರಸ್ತುತ ಪಡಿಸಿ ಪ್ರೇಕ್ಷಕರ ಮನೆ ಮಾಡಿತ್ತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ. ಡಿ. ಸುದರ್ಶನ ಮತ್ತು ಇಲಾಖೆಯ ಸಿಬಂಧಿಗಳು ಹಾಜರಿದ್ದರು.