
ಮೈಸೂರು: ಕುರ್ ಕುರೆ ಪ್ಯಾಕೆಟ್ನಲ್ಲಿದ್ದ ಬಾಲ್ ನುಂಗಿ ಮೂರು ವರ್ಷ ವಯಸ್ಸಿನ ಮಗುವೊಂದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರದಲ್ಲಿ ಘಟನೆ ನಡೆದಿದೆ. ಗ್ರಾಮದ ನಿವಾಸಿಯಾದ ಸಂತೋಷ್-ಐಶ್ವರ್ಯ ದಂಪತಿಯ ಏಕೈಕ ಪುತ್ರ ಮುಕುಂದ್ ಮಯೂರ್ ಸಾವನ್ನಪ್ಪಿದ ಮಗು.
ಮಗು ಅಳುತ್ತಿದ್ದುದನ್ನು ಕಂಡು ಸಂಬAಧಿಕರ ಮಕ್ಕಳು ಗೌರಿಪುರದ ಅಂಗಡಿಯಲ್ಲಿ ಕುರ್ ಕುರೆ ಪ್ಯಾಕೆಟ್ ಕೊಡಿಸಿದ್ದರು. ಕುರ್ ಕುರೆ ಪ್ಯಾಕೆಟ್ನಲ್ಲಿ ಮಕ್ಕಳ ಆಕರ್ಷಣೆಗಾಗಿ ಇದ್ದ ಪ್ಲಾಸ್ಟಿಕ್ ಬಾಲ್ ಅನ್ನು ಮಗು ಕುರ್ ಕುರೆಯೊಂದಿಗೆ ನುಂಗಿದೆ. ಪ್ಲಾಸ್ಟಿಕ್ ಬಾಲ್ ಗಂಟಲಿಗೆ ಸಿಲುಕಿ ಮಗು ಒದ್ದಾಡಿದೆ. ಇದನ್ನು ಗಮನಿಸಿದ ಪೋಷಕರು ತಕ್ಷಣ ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಮಾರ್ಗ ಮಧ್ಯೆ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಮಗುವಿನ ಸಂಬAಧಿಕರು ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಮಗುವಿನ ತಾತ ಶಂಕರ್ನಾಯಕ, ”ನನ್ನ ಮೊಮ್ಮಗ ಮುಕುಂದ್ ಮಯೂರನಿಗೆ ಕುರ್ ಕುರೆ ಪ್ಯಾಕೆಟ್ಅನ್ನು ತೆಗೆದುಕೊಟ್ಟಿರುತ್ತಾರೆ. ಅದರಲ್ಲಿ ಗಿಫ್ಟ್ ಅಂತೇಳಿ ಪ್ಲಾಸ್ಟಿಕ್ನ ಉಂಗುರಗಳು, ಬಾಲ್ಗಳನ್ನು ಹಾಕಿರ್ತಾರೆ. ಕುರ್, ಕುರೆ ತಿನ್ನುವಾಗ ಆ ಬಾಲ್ನ್ನು ಬಾಯಿಯಲ್ಲಿ ಹಾಕೊಂಡಾಗ, ಅದು ಗಂಟಲಲ್ಲಿ ಸಿಕ್ಕಾಕೊಂಡಿತ್ತು. ಆಗ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅವನು ಸಾವನ್ನಪ್ಪಿದ್ದಾನೆ” ಎಂದು ತಿಳಿಸಿದರು.