Skip to main content

3Kaala News

ಸುಭಾಷಿತ 

ತನ್ನ ಕಣ್ಣೀರನ್ನು ತಾನೇ ಒರೆಸಿಕೊಳ್ಳುವ ವ್ಯಕ್ತಿ, ಇನ್ನೊಬ್ಬರ ಕಣ್ಣಲ್ಲಿ ಕಣ್ಣೀರು ಕಾಣಲು ಇಷ್ಟಪಡುವುದಿಲ್ಲ.
ಯಾಕೆಂದರೆ…
ನೋವಿನ ತೂಕ ಎಷ್ಟು ಭಾರವೆಂದು ಅವನು ಜೀವನದಿಂದಲೇ ಕಲಿತಿರುತ್ತಾನೆ. ಆದ್ದರಿಂದ ತಾನು ನೊಂದುಕೊಂಡರೂ, ಇತರರ ಸಂತೋಷಕ್ಕಾಗಿ ಪ್ರಾರ್ಥಿಸುತ್ತಿರುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕಾವೇರಿ ವಿವಾದಕ್ಕೆ ಸಂಕಷ್ಟ ಸೂತ್ರವೊಂದೇ ಪರಿಹಾರ; ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ

ಮೈಸೂರು; ಕಾವೇರಿ ವಿವಾದವನ್ನು ಕೊನೆಗಾಣಿಸಲು ಸಂಕಷ್ಟ ಸೂತ್ರವೊಂದೇ ಪರಿಹಾರವೆಂದು ಕರ್ನಾಟಕ ರಾಜ್ಯ ರೈತ ಸಂಘ ಅಭಿಪ್ರಾಯಪಟ್ಟಿದೆ.
ಮಂಗಳವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಕಾವೇರಿ ಜಲವಿವಾದದ ನ್ಯಾಯಾಧಿಕರಣವಾಗಲೀ, ಸರ್ವೋಚ್ಚ ನ್ಯಾಯವಾಗಲಿ ತನ್ನ ತೀರ್ಪಿನಲ್ಲಿ ಸಂಕಷ್ಟ ಬಂದಾಗ ನೀರು ಹಂಚಿಕೆ ಬಗ್ಗೆ ಸ್ಪಷ್ಟ ಆದೇಶ ಮಾಡದೇ ಇರುವುದು ಈ ಸಮಸ್ಯೆಗೆ ಕಾರಣವಾಗಿದೆ. ಈಗಲಾದರೂ ನೀರಿನ ಕೊರತೆ ಇದ್ದಾಗ ಸಂಕಷ್ಟ ಸೂತ್ರವನ್ನು ರಚಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಕಾವೇರಿ ವಿವಾದದ ಪಕ್ಷಗಾರರಾದ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಂಕಷ್ಟ ಸೂತ್ರ ರೂಪಿಸಲು ಮುಂದಾಗಬೇಕು. ಇಲ್ಲವೇ, ನಾಲ್ಕು ರಾಜ್ಯದ ಮುಖ್ಯಮಂತ್ರಿಗಳು ಪರಸ್ಪರ ಮಾತುಕತೆ ಮೂಲಕ ಸ್ಪಷ್ಟ ಸೂತ್ರ ರೂಪಿಸಿಕೊಳ್ಳಬೇಕು.
ವಿವಾದ ಬಗೆಹರಿದೇ ಇದ್ದರೆ ಸಂಕಷ್ಟ ಸೂತ್ರಕ್ಕಾಗಿಯೇ ಪ್ರತ್ಯೇಕ ನ್ಯಾಯಾಧೀಕರಣ ರಚಿಸಬೇಕು.
ಈ ನಿಟ್ಟಿನಲ್ಲಿ ನಾಲ್ಕು ರಾಜ್ಯನ್ನೊಳಗೊಂಡ ರೈತರೇ ರಚಿಸಿಕೊಂಡಿರುವ “ಕಾವೇರಿ ಕುಟುಂಬಕ್ಕೆ” ಮರುಜೀವ ನೀಡಿ ರೈತರೇ ಪರಸ್ಪರ ಮಾತುಕತೆ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ ಆಲೋಚನೆ ಮಾಡಿದ್ದು ಈ ಸಂಬAಧ ಸದ್ಯದಲ್ಲೇ ಪೂರ್ವಭಾವಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಕಾವೇರಿ ಜಲಾಯನ ಪ್ರದೇಶದ ನೀರಿನ ಇಳುವರಿ ಕಡಿಮೆಯಾಗಿರುವುದರಿಂದ ನೀರು ಹಂಚಿಕೆ ಸೂತ್ರವನ್ನು ಮರುಪರಿಶೀಲಿಸುವ ಅಗತ್ಯ ಇದೆ ಎಂದು ಹೇಳಿದರು.
ಆ.10 ರಂದು ಬೃಹತ್ ಚಳುವಳಿ;
ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿ ಮಾದರಿ ಕಾರ್ಪೊರೇಟ್ ಕಂಪೆನಿಗಳೇ ದೇಶ ಬಿಟ್ಟು ತೊಲಗಿ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಜಂಟಿ ಕಾರ್ಮಿಕ ಸಂಘಟನೆ ಜಂಟಿಯಾಗಿ ಆಗಸ್ಟ್ 10 ರಂದು ದೇಶದಾದ್ಯಂತ ಚಳುವಳಿ ನಡೆಸಲು ಕರೆ ನೀಡಿದ್ದು, ಕೋಟ್ಯಾಂತರ ಜನರು ಅಂದು ಬೀದಿಗೆ ಇಳಿದು ಬಂಧನಕ್ಕೊಳಗಾಗಲಿದ್ದಾರೆ. ರಾಜ್ಯದಲ್ಲಿ ಅಂದು ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಎಲ್ಲಾ ಜಿಲ್ಲಾ ಕೇಂದ್ರದಲ್ಲೂ ರೈತ, ದಲಿತ, ಕಾರ್ಮಿಕ, ಮಹಿಳಾ ವಿದ್ಯಾರ್ಥಿ ಯುವಜನರು ಬೀದಿಗೆ ಇಳಿದು ಬಂಧನಕ್ಕೊಳಗಾಗಲಿದ್ದಾರೆ ಎಂದು ತಿಳಿಸಿದರು.
ಕೃಷಿ ಇಲಾಖೆ ಹುದ್ದೆಗೆ ಕೃಷಿಯೇತರ ಪದವಿದರರ ನೇಮಕ ಸರಿಯಲ್ಲ;
ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿಗಳು ಮತ್ತು ಕೃಷಿ ಅಧಿಕಾರ ವೃಂದದ ಹುದ್ದೆಗೆ ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿದ್ದು . ಬಿಇ (ಬಯೋಟೆಕ್) ಪದವಿದರರನ್ನು ಈ ಹುದ್ದೆಗೆ ಅರ್ಹರೆಂದು ಪರಿಗಣಿಸಿ ಪರೀಕ್ಷೆಗೆ ಅವಕಾಶ ನೀಡಿರುವುದು ಸರಿಯಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಬಿಇ ಪದವಿಧರರ ಕೃಷಿ ಸಂಬAಧಿತ ಪಠ್ಯವನ್ನು ಕಲಿತಿರುವುದಿಲ್ಲ. ಇವರು ಈ ಹುದ್ದೆ ಅರ್ಹರಲ್ಲ ಕಾರ್ಪೋರೇಟ್ ಕಂಪೆನಿಗಳ ಒತ್ತಾಯಕ್ಕೆ ಮಣಿದು ಕೃಷಿಯೇತರ ಪದವಿದರರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ ಇದನ್ನು ಕೈಬಿಡಬೇಕೆಂದು ಸಂಘ ಆಗ್ರಹಿಸುತ್ತದೆ. ಈ ಸಂಬAಧ ಕೃಷಿ ಪದವೀಧರರ ನಾಳೆ ಬೆಂಗಳೂರಿನ ಸ್ವತಂತ್ರ÷್ಯ ಉದ್ಯಾನವನದಲ್ಲಿ ಚಳುವಳಿ ಹಮ್ಮಿಕೊಂಡಿದ್ದು, ಈ ಚಳುವಳಿ ಕರ್ನಾಟಕ ರಾಜ್ಯ ರೈತ ಸಂಘ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ಮಂಡಕಳ್ಳಿ ಮಹೇಶ್ ಉಪಸ್ಥಿತರಿದ್ದರು.