Skip to main content

3Kaala News

ಸುಭಾಷಿತ 

ಜೀವನ ಅನ್ನುವ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷದ ಬುತ್ತಿಯನ್ನು ಇಟ್ಟು ಕಳಿಸುತ್ತಾನೆ. ಆದರೆ ನಾವು ನಮ್ಮ ಜೋಳಿಗೆಯಲ್ಲಿ ಏನಿದೆ ಎಂದು ನೋಡಿ ಆನಂದಪಡುವುದನ್ನು ಬಿಟ್ಟು,ಬೇರೆಯವರ ಜೋಳಿಗೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲದಿಂದ ಸದಾ ದುಃಖಿಯಾಗಿರುತ್ತೇವೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಇಬ್ಬರು ಮುಸ್ಲಿಂ ತಜ್ಞರಿಂದ ಉದ್ಘಾಟನೆ: ಅಪರೂಪದ ಕ್ಷಣಗಳಿಗೆ ಸಾಕ್ಷಿಯಾದ ಮೈಸೂರು “ಸಂಘ” ಗಣೇಶೋತ್ಸವ


ಮೈಸೂರು: ನಗರದ ಅತ್ಯಂತ ಪ್ರಮುಖ ಗಣೇಶೋತ್ಸವಗಳಲ್ಲೊಂದಾದ ಶ್ರೀ ಮಾಧವ ಕೃಪಾ ಗಣೇಶೋತ್ಸವ ಈ ಬಾರಿ ಅಪರೂಪದ ಕ್ಷಣಗೆಳಿಗೆ ಸಾಕ್ಷಿಯಾಯಿತು. ಸೋಮವಾರ ಆರಂಭವಾದ ಈ ಗಣೇಶೋತ್ಸವವನ್ನು ಖ್ಯಾತ ಸಿರಿ ಧಾನ್ಯ ತಜ್ಞ ಪದ್ಮಶ್ರೀ ಪುರಸ್ಕöÈತ “ಮಿಲೆಟ್ ಮ್ಯಾನ್” ಡಾ. ಖಾದರ್ ವಾಲಿ ಉದ್ಘಾಟಿಸಿದರೆ, ರಾಷ್ಟಿçÃಯ ಸ್ವಯಂ ಸೇವಕ ಸಂಘ ಸಾಗಿ ಬಂದ ದಾರಿಯ ಪ್ರದರ್ಶಿನಿಯನ್ನು ಖ್ಯಾತ ವೈದ್ಯ ಡಾ. ಜಾವೇದ್ ನಯೀಮ್ ಉದ್ಘಾಟಿಸಿದರು. ಇವರೊಂದಿಗೆ ಹಲವರು ಮುಸ್ಲಿಂಮರು ಕೂಡಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರದರ್ಶಿನಿ ಉದ್ಘಾಟಿಸಿ ಮಾತನಾಡಿದ ವೈದ್ಯ ಡಾ. ಜಾವೇದ್ ನಯೀಮ್, “ಕೋಮು ಸೌಹಾರ್ದತೆ ನನ್ನ ಬಾಲ್ಯದ ಕನಸು. ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು. “ಏಕತೆ ನಮ್ಮ ಶಕ್ತಿ. ಸೌಹಾರ್ದತೆ ನಮ್ಮೆಲ್ಲರ ಅಭಿವೃದ್ಧಿಗೆ ಪೂರಕ,” ಎಂದು ಹೇಳಿದರು.
ಸಂಘ ಪರಿವಾರದ ಬಗ್ಗೆ ಅರಿತುಕೊಂಡಷ್ಟು ಅದರ ಬಗ್ಗೆಗಿನ ತಪುö್ಪ ಅಭಿಪ್ರಾಯಗಳು ನಿವಾರಣೆ ಆಗುತ್ತವೆ. ನಮ್ಮ ನಡುವೆ ಒಗ್ಗಟ್ಟು ಮೂಡುತ್ತದೆ,” ಎಂದರು. ಸಂಘ ಪರಿವಾರದ ಬಗ್ಗೆ ಅರಿತುಕೊಳ್ಳದೆ ಟೀಕಿಸುವುದು ಸರಿಯಲ್ಲ. ಅದರ ಸೇವೆಯನ್ನು ಅರಿತುಕೊಂಡಾಗ ಸಂಘದ ಪ್ರಾಮುಖ್ಯತೆ- ಶಕ್ತಿ ಹಾಗು ರಾಷ್ಟç ನಿರ್ಮಾಣದಲ್ಲಿ ಅದರ ಪಾತ್ರದ ಅರಿವಾಗುತ್ತದೆ,” ಎಂದರು.
ಆರ್ ಎಸ್ ಎಸ್ ಬಗ್ಗೆಗಿನ ಈ ಪ್ರದರ್ಶನಿ, ಬಹಳ ಮಹತ್ವದ್ದು. ನಾನು ಚಿಕ್ಕಂದಿನಿAದಲೂ ಎಲ್ಲರ ಏಕತೆಯ ಕನಸು ಕಂಡವನು. ಈ ಪ್ರದರ್ಶಿನಿಯ ಸಂದೇಶ ಅಂತ್ಯAತ ಮಹತ್ವದ್ದು. ಅದು ನಮ್ಮ ಸಮಾಜಕ್ಕೆ ಬಹಳ ಸಂದೇಶ ನೀಡುತ್ತಿದೆ. ಸೌಹಾರ್ದತೆ ದೇಶದ ಶಕ್ತಿ ಮತ್ತು ಅತ್ಯಗತ್ಯ,” ಎಂದು ತಿಳಿಸಿದರು.
ಮಿಲೆಟ್ ಮ್ಯಾನ್” ಡಾ. ಖಾದರ್ ವಾಲಿ ಮಾತನಾಡಿ, ಸುಸ್ಥಿರ ಕೃಷಿ ಹಾಗು ಸುಸ್ಥಿರ ಆಹಾರ ಪದ್ಧತಿ ಈಗಿನ ತುರ್ತು ಎಂದರು.
ಮೀಟ್ ಪ್ರೊಟೀನ್ ದುಷ್ಪರಿಣಾಮ ಬಗ್ಗೆ ವಿವರಿಸಿದ ಅವರು, ಸಿರಿ ಧಾನ್ಯಗಳು, ವೇಗಾನ್ ಪ್ರೊಟೀನ್ ನಮ್ಮ ಆರೋಗ್ಯಕ್ಕೆ ಪೂರಕ. ಈ ಬಗ್ಗೆ ಚಿಂತನ-ಮAಥನ ನಡೆಯಬೇಕು,” ಎಂದರು.
“ಸುಸ್ಥಿರ ಜೀವನ ಕ್ರಮದಲ್ಲಿ ಸಿರಿಧಾನ್ಯಗಳ ಪಾತ್ರ ಅತಿ ದೊಡ್ಡದು,” ಎಂದು ಅಭಿಪ್ರಾಯಪಟ್ಟರು.
ಸನಾತನ ಧರ್ಮದ ಆಚರಣೆಗಳು, ಸಾರ್ವಕಾಲಿಕ ಮೌಲ್ಯ ಹೊಂದಿವೆ. “ಇಲ್ಲಿ ಪ್ರತಿಯೊಂದು ಆಚರಣೆಗಳ ಹಿಂದೆ ವೈಜ್ಞಾನಿಕ ಕಾರಣಗಳಿರುತ್ತದೆ. ಇದನ್ನು ಎಲ್ಲರೂ ಅರಿತುಕೊಂಡರೆ, ಬದುಕಿನ ಸಾರ್ಥಕತೆ ಸಾಧ್ಯ,” ಎಂದರು.
ಚಾಮರಾಜನಗರ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಎಂ ಆರ್ ಗಂಗಾಧರ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಡಾ. ಬಾಲಕೃಷ್ಣೇ ಗೌಡ, ದರ್ಶನ್ ರಾಜ್, ವಾಸುದೇವ ಭಟ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.