
ಮೈಸೂರು: ನಗರದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲೊಂದಾದ ಅವಧೂತ ದತ್ತ ಪೀಠದ ಗಿಳಿಗಳ ಪುನರ್ವಸತಿ ಕೇಂದ್ರಶುಕವನ’ವು ಜೂನ್ 1 ರಿಂದ ಮುಂದಿನ ಸೂಚನೆಯವರೆಗೆ ತಾತ್ಕಾಲಿಕವಾಗಿ ಮುಚ್ಚಲ್ಪಡಲಿದೆ ಎಂದು ದತ್ತ ಪೀಠದ ಆಡಳಿತ ಮಂಡಳಿ ತಿಳಿಸಿದೆ.
ಅಭಿವೃದ್ಧಿ ಹಾಗೂ ನವೀಕರಣ ಕಾಮಗಾರಿಗಳ ಹಿನ್ನೆಲೆಯಲ್ಲಿ ಶುಕವನಕ್ಕೆ ಸಾರ್ವಜನಿಕರ ಪ್ರವೇಶವನ್ನು ಸದ್ಯಕ್ಕೆ ನಿರ್ಬಂಧಿಸಲಾಗುತ್ತಿದೆ .
ಶುಕವನ ಮುಚ್ಚಲ್ಪಟ್ಟಿದ್ದರೂ, ಅದಕ್ಕೆ ಹೊಂದಿಕೊAಡAತಿರುವ ವಿಶ್ವವಿಖ್ಯಾತ ಬೋನ್ಸಾಯ್ ಉದ್ಯಾನವನ ಮತ್ತು ವಿಶ್ವಂ ವಸ್ತು ಸಂಗ್ರಹಾಲಯಗಳು ಎಂದಿನAತೆ ಕಾರ್ಯನಿರ್ವಹಿಸಲಿವೆ. ಪ್ರವಾಸಿಗರು ಮತ್ತು ಸಾರ್ವಜನಿಕರು ಎಂದಿನAತೆ ಈ ಎರಡು ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ಅಭಿವೃದ್ಧಿ ಕೆಲಸಗಳಿಗಾಗಿ ಶುಕವನವನ್ನು ಮಾತ್ರ ತಾತ್ಕಾಲಿಕವಾಗಿ ಮುಚ್ಚಲಾಗುತ್ತಿದ್ದು, ಇದರಿಂದ ವೀಕ್ಷಕರಿಗೆ ಉಂಟಾಗುವ ಅನಾನುಕೂಲತೆಗೆ ವಿಷಾದಿಸುತ್ತೇವೆ. ಸಾರ್ವಜನಿಕರು ಮತ್ತು ಭಕ್ತಾದಿಗಳು ಎಂದಿನAತೆ ತಮ್ಮ ಸಹಕಾರವನ್ನು ಮುಂದುವರಿಸಬೇಕಾಗಿ ಮನವಿ ಮಾಡಿದೆ.