ಹಲವು ಬಡಾವಣೆಗಳಲ್ಲಿ ಆ.11,12ರಂದು ನೀರು ಸರಬರಾಜು ವ್ಯತ್ಯಯ

ಮೈಸೂರು: ನಗರಕ್ಕೆ ಕುಡಿಯುವನೀರು ಸರಬರಾಜು ಮಾಡುವ ಮೆಳಾಪುರ ನೀರು ಸರಬರಾಜುಯೋಜನೆಯ ಪ್ರಮುಖ ಕೊಳವೆ ಮಾರ್ಗದಲ್ಲಿತುರ್ತು ದುರಸ್ಥಿಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ, ಆ. 11 ಮತ್ತು 12 ರಂದು ಮೈಸೂರಿನ ಹಲವು ಭಾಗಗಳಲ್ಲಿ ಸಂಪೂರ್ಣವಾಗಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.
ನಗರ ಪಾಲಿಕೆಯ ವಾರ್ಡ್ ಸಂಖ್ಯೆ 9 ರಿಂದ 16, 28 ರಿಂದ 39, ಹಾಗೂ 52 ಮತ್ತು 53 ರ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಾದ ರಾಜೇಂದ್ರನಗರ, ಸುಭಾಷ್ ನಗರ, ಎನ್.ಆರ್.ಮೊಹಲ್ಲಾ, ಗಾಂಧಿನಗರ, ಉದಯಗಿರಿ, ರಾಜೀವ್ ನಗರ 1, 2 ಮತ್ತು 3ನೇ ಹಂತ, ಶಾಂತಿನಗರ, ಕಲ್ಯಾಣಗಿರಿ, ಡಾ.ರಾಜ್ಕುಮಾರ್ರಸ್ತೆಗೆ ಸೇರಿಕೊಂಡ ಬಡಾವಣೆಗಳು, ಯರಗನಹಳ್ಳಿ, ಸಿದ್ದಾರ್ಥ ಬಡಾವಣೆ, ಆಲನಹಳ್ಳಿ, ನಂದಿನಿ ಬಡಾವಣೆ, ಗಿರಿದರ್ಶಿನಿ ಬಡಾವಣೆ, ಗೌಸಿಯಾನಗರ ಮತ್ತು ಕ್ಯಾತಮಾರನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಿವಾಸಿಗಳು ಮುಂಚಿತವಾಗಿಯೇ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಮಹಾನಗರ ಪಾಲಿಕೆಯ ನೀರು ಸರಬರಾಜು ಮತ್ತು ಒಳಚರಂಡಿ ಪೂರ್ವ ವಿಭಾಗದಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.