ಲೋಕಕ್ಕೆ ಬೆಳಕಾಗಿರುವ ದಾಸ ಸಾಹಿತ್ಯದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಲಿ; ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ
ಮೈಸೂರು: ಲೋಕಕ್ಕೆ ಬೆಳಕಾಗಿರುವ ದಾಸ ಸಾಹಿತ್ಯದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಲಿ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಹೇಳಿದರು.ಶನಿವಾರ ಅಗ್ರಹಾರದ ದಿವಾನ್ ಪೂರ್ಣಯ್ಯ ಛತ್ರದಲ್ಲಿ ಏರ್ಪಡಿಸಲಾಗಿದ್ದ ವಿಶ್ವಮಧ್ವ ಮಹಾಪರಿಷತ್ತಿನ ಅಂಗಸAಸ್ಥೆಯಾದ ಸೌರಭ ದಾಸ ಸಾಹಿತ್ಯ ವಿದ್ಯಾಲಯದ 9ನೇ ಸಮ್ಮೇಳನ, 2 ದಿನಗಳ ವಿಶ್ವ ಸಮಾವೇಶ ಮತ್ತು ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಅಮೃತೋಪದೇಶ ನೀಡಿದರು.ಜ್ಞಾನಿಗಳ, ಯತಿವರೇಣ್ಯರ, ಆಚಾರ್ಯ ಮಧ್ವರ ಮತ್ತು ಹರಿದಾಸರ ಸಂದೇಶ ಮತ್ತು ತತ್ವ ಚಿಂತನೆಗಳು ಸಮದಾಯದ ಎಲ್ಲೆಯನ್ನು ಮೀರಿ, ವಿಶ್ವದ ಜನರ…