3Kaala News

ಸುಭಾಷಿತ 

ಓಟದ ಬದುಕಿನಲ್ಲಿ ಎಲ್ಲವನ್ನು ತಕ್ಷಣವೇ ಪಡೆದುಕೊಳ್ಳಬೇಕೆಂಬ ನಿನ್ನ ಹಟವೇ ನಿನ್ನ ನೆಮ್ಮದಿಯನ್ನು ಕದಿಯುತ್ತದೆ. ಸಮಯಕ್ಕಿಂತ ಮುಂಚೆ, ಹಣೆ ಬರಕಿಂತ ಮುಂಚೆ, ಹೆಚ್ಚಿಗೆ ಯಾರಿಗೂ ಏನೂ ಸಿಗುವುದಿಲ್ಲ . ನಿನ್ನ ಪ್ರಯತ್ನ ನಿರಂತರವಾಗಿರಲಿ. ಆದರೆ, ಫಲಿತಾಂಶಕ್ಕಾಗಿ ಇಂದಿನ ಶಾಂತಿಯನ್ನು ಬಲಿ ಕೊಡಬೇಡ. ಭಗವಾನ್ ಶ್ರೀ ಕೃಷ್ಣ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೈಸೂರು ಯೋಗೀಸ್ ಟ್ರಸ್ಟ್ವತಿಯಿಂದ ಕಂಪ್ಯೂಟರ್, ಮಕ್ಕಳ ಪುಸ್ತುಕಗಳ ಕೊಡುಗೆ ಹಸ್ತಾಂತರ


ಮೈಸೂರು ; ಮೈಸೂರು ಯೋಗೀಸ್ ಟ್ರಸ್ಟ್ವತಿಯಿಂದ ಶನಿವಾರ ನಗರದ ದೊಡ್ಡಪೇಟೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಗೆ ಮೈಸೂರು ನಗರ ಇಲ್ಲಿಯ ಶೈಕ್ಷಣಿಕ ಅಭಿವೃದ್ಧಿಗಾಗಿ ಕಂಪ್ಯೂಟರ್ ಹಾಗೂ ಶಾಲಾ ಮಕ್ಕಳ ಗ್ರಂಥಾಲಯಕ್ಕೆ ಕೆಲವು ಉಪಯುಕ್ತ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.
ಮೈಸೂರು ಯೋಗೀಸ್ ಟ್ರಸ್ಟ್ ಸಂಸ್ಥಾಪಕ ಯೋಗ ಪ್ರಕಾಶ್, ಲಯನ್ ಸುರೇಶ್, ಗೌರವ ಅಧ್ಯಕ್ಷ ಬಿ. ವಿ. ಮಂಜುನಾಥ್ ಅವರು ಶಾಲೆಯ ಮುಖ್ಯ ಉಪಾಧ್ಯಾಯ ರವೀಶ್ ಅವರಿಗೆ ಕಂಪ್ಯೂಟರ್ ಹಾಗೂ ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನ್ನು ಹಸ್ತಾಂತರಿಸಿದರು. ಈ ವೇಳೆ ವಿಶ್ವ ನಾಥ್, ಪ್ರತಿಭಾ, ಸ್ವಾಮಿ ಇನ್ನಿತರರು ಹಾಜರಿದ್ದರು.