ಗ್ರಾಮದ ಮಧ್ಯದಲ್ಲಿ ನಡೆದ ವಾಮಾಚಾರ ! ಬೆಚ್ಚಿ ಬಿದ್ದ ಗ್ರಾಮಸ್ಥರು
ನಂಜನಗೂಡು: ಅಮಾವಾಸ್ಯೆ ರಾತ್ರಿ ಗ್ರಾಮದ ಮಧ್ಯದಲ್ಲಿ ನಡೆದ ವಾಮಾಚಾರ ನಡೆಸಿರುವ ಘಟನೆ ನಂಜನಗೂಡು ತಾಲೂಕಿನ ಗೋಳೂರು ಗ್ರಾಮದಲ್ಲಿ ನಡೆದಿದ್ದು, ಇದರಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಗೋಳೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಕಿಡಿಗೇಡಿಗಳು ರಂಗೋಲೆ ಹಾಕಿ, ಮನುಷ್ಯನ ತಲೆಬುರುಡೆ ಮತ್ತು ಹಸ್ತದ ಮೂಳೆ ಇಟ್ಟು ಮಾಟ-ಮಂತ್ರ ಮಾಡಿರುವುದು ಬುಧವಾರ ಬೆಳಗ್ಗೆ ಕಂಡು ಬಂದಿದೆ.ಗ್ರಾಮದ ಜನರು ಬೆಳಗ್ಗೆ ಕೆಲಸಕ್ಕೆ ಹೋಗುವ ವೇಳೆ ಮುಖ್ಯ ರಸ್ತೆ ಮಧ್ಯದಲ್ಲಿ ವಿಚಿತ್ರ ರಂಗೋಲೆ ಕಂಡಿದೆ. ರಂಗೋಲೆಯ ಮಧ್ಯದಲ್ಲಿ ಮಾನವನ ತಲೆಬುರುಡೆ, ಹಸ್ತದ ಮೂಳೆಗಳನ್ನು ಇರಿಸಲಾಗಿತ್ತು. ಸುತ್ತ…