Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕೇವಲ 10 ದಿನಕ್ಕೆ ಕಬಿನಿ ಜಲಾಶಯದಲ್ಲಿದ್ದ 10 ಅಡಿ ನೀರು ತಮಿಳುನಾಡಿನ ಪಾಲು !

*ಜಲಾಶಯದಲ್ಲಿದ್ದ 6 ಟಿಎಂಸಿ ನೀರು ಖಾಲಿಮೈಸೂರು: ಜಿಲ್ಲೆಯ ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಿಂದ ನಿರಂತರವಾಗಿ ಪ್ರತಿನಿತ್ಯವೂ ತಮಿಳುನಾಡಿಗೆ ಒಂದು ಟಿಎಂಸಿ ನೀರು ಹರಿಸುತ್ತಿರುವುದರಿಂದ ಜಲಾಶಯದಲ್ಲಿದ್ದ 10 ಅಡಿ ನೀರು ಅಂದರೆ 6 ಟಿಎಂಸಿ ನೀರು ಕೇವಲ 10 ದಿನಕ್ಕೆ ಖಾಲಿಯಾಗಿದೆ. ಈ ನೀರನ್ನು ನದಿ ಮೂಲಕ ತಮಿಳುನಾಡಿಗೆ ಹರಿಸಲಾಗಿದೆ. ಇದರಿಂದಾಗಿ ಜಲಾಶಯದ ನೀರಿನ ಮಟ್ಟ ತೀವ್ರ ಕುಸಿತ ಕಂಡಿದೆ.ಕೇರಳದ ವಯನಾಡು ಹಾಗೂ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಭರ್ಜರಿಯಾಗಿ ಮಳೆಯಾಗುತ್ತಿದ್ದರಿಂದ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ…

Read More

ದಸರಾಗೆಂದು ಮೈಸೂರಿಗೆ ಬರುವ ಗಜಪಡೆ ನಿರ್ವಹಣೆಗೆ 2 ಕೋಟಿಗೆ ಪ್ರಸ್ತಾವ !

*ಕಳೆದ ಬಾರಿ 80 ಲಕ್ಷರೂ ಖರ್ಚು ಮಾಡಲಾಗಿತ್ತು, ಈ ಬಾರಿ 2 ಕೋಟಿ ರೂ ನೀಡಲು ಬೇಡಿಕೆಮೈಸೂರು; ಈ ಬಾರಿ ವಿಜೃಂಭಣೆಯಿAದ ನಡೆಯಲಿರುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲೆಂದು ಕಾಡಿನಿಂದ ಅರಮನೆ ನಗರಿ ಮೈಸ್ರರಿಗೆ ಆಗಮಿಸಲಿರುವ ಗಜಪಡೆಯ 50 ದಿನಗಳಿಗೂ ಹೆಚ್ಚು ಕಾಲದ ವಿಶೇಷ ಆತಿಥ್ಯದ ಪೋಷಣೆ ಹಾಗೂ ಅವುಗಳ ನಿರ್ವಹಣೆಗಾಗಿ ಅರಣ್ಯ ಇಲಾಖೆ ಎರಡು ಕೋಟಿ ರೂ. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ.ಕಳೆದ ವರ್ಷ 80 ಲಕ್ಷರೂಗಳನ್ನು ಗಜಪಡೆಯ ಆತಿಥ್ಯಕ್ಕೆಂದು ನೀಡಲಾಗಿತ್ತು. ಆದರೆ ಈಗ…

Read More

ಯಾವ್ಯಾವ ಬದಲಿ ನಿವೇಶನಗಳ ಹಂಚಿಕೆಯನ್ನು ರದ್ದು ಮಾಡಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಿ; ವಿಧಾನಪರಿಷತ್ ಸದಸ್ಯ ಆರ್. ರಘು ಕೌಟಿಲ್ಯ ಆಗ್ರಹ

ಮೈಸೂರು: ಈ ಹಿಂದಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಬಡಾವಣೆಗಳ ನಿರ್ಮಾಣಕ್ಕೆಂದು ಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳಿಗೆ ಪ್ರತಿಯಾಗಿ 50:50ರ ಅನುಪಾತದಲ್ಲಿ ನೀಡಲಾಗಿದ್ದ 1,100 ಬದಲಿ ನಿವೇಶನಗಳ ಹಂಚಿಕೆಯನ್ನು ನಗರಾಭಿವೃದ್ಧಿ ಇಲಾಖೆ ರದ್ದುಪಡಿಸಿದೆ. ಅವು ಯಾವ್ಯಾವ ನಿವೇಶನಗಳು , ಎಲ್ಲೆಲ್ಲಿ ಇವೆ ಎಂಬ ಸಂಪೂರ್ಣ ಮಾಹಿತಿಯನ್ನು ಅಧಿಸೂಚನೆ ಮೂಲಕ ಕೂಡಲೇ ಪ್ರಕಟಿಸಬೇಕು’ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಆರ್. ರಘು ಕೌಟಿಲ್ಯ ಆಗ್ರಹಿಸಿದರು.ಶನಿವಾರ ನಗರದ ಚಾಮರಾಜಪ್ಮರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಡಾದಿಂದ ಶೇ 50;50 ಅನುಪಾತದಡಿ ನಡೆದಿದ್ದ…

Read More

ಗಜಪಡೆ ಕ್ಯಾಪ್ಟನ್ ಪಟ್ಟಕ್ಕಾಗಿ ನಾಲ್ಕು ಆನೆಗಳ ನಡುವೆ ಪೈಪೋಟಿ; ತಾಲೀಮಿನಲ್ಲಿ ಸೈ ಎನಿಸಿಕೊಂಡ ಆನೆಗೆ ಪಟ್ಟ ಗ್ಯಾರಂಟಿ

ಮೈಸೂರು; ಈ ಬಾರಿ ಅದ್ಧೂರಿಯಾಗಿ ನಡೆಯಲಿರುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಗಜಪಡೆಯ ಕ್ಯಾಪ್ಟನ್ ಪಟ್ಟಕ್ಕಾಗಿ ನಾಲ್ಕು ಆನೆಗಳ ನಡುವೆ ಪೈಪೋಟಿ ನಡೆಯಲಿದೆ. ಕಾಡಿನಿಂದ ನಾಡಾದ ಅರಮನೆ ನಗರಿ ಮೈಸೂರಿಗೆ ಬಂದು ಅರಮನೆ ಆವರಣದಲ್ಲಿ ಬೀಡು ಬಿಡಲಿರುವ ಗಜಪಡೆಗೆ ನಿತ್ಯವೂ ತಾಲೀಮು ನಡೆಸಲಾಗುತ್ತದೆ. ಇದರಲ್ಲಿ ಕ್ಯಾಪ್ಟನ್ ಪಟ್ಟಕ್ಕಾಗಿ ನಾಲ್ಕು ಗಂಡಾನೆಗಳು ಪೈಪೋಟಿ ನೀಡಲಿವೆ. ತಾಲೀಮನ್ನು ಸಮರ್ಥವಾಗಿ ನಿಭಾಯಿಸಿ, ಎಲ್ಲರೀತಿಯಿಂದ ನಾನು ಸಮರ್ಥ ಎಂದು ಸಾಬೀತುಪಡಿಸುವ ಆನೆಗೆ ಕ್ಯಾಪ್ಟನ್ ಪಟ್ಟ ಸಿಗಲಿದೆ.ಇಲ್ಲಿಯ ತನಕ ಚಿನ್ನದ…

Read More

ಮೈಸೂರಿನಲ್ಲಿ ಮೊದಲ ಬಾರಿಗೆ ನಾಗರಿಕ ವಿಮಾನಯಾನ ಇಲಾಖೆಯ ಸಮಾಲೋಚನಾ ಸಮಿತಿ ಸಭೆ

ನಾಗರಿಕ ವಿಮಾನಯಾನ ಸಚಿವರು ಹಾಗೂ ಸಮಿತಿಯ ಸದಸ್ಯರಿಂದ ಚಾಮುಂಡಿ ಬೆಟ್ಟ ಭೇಟಿಮೈಸೂರು; ಅರಮನೆ ನಗರಿ ಮೈಸೂರಿಗೆ ಆಗಮಿಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವರು, ನಾಗರಿಕ ವಿಮಾನಯಾನ ರಾಜ್ಯ ಸಚಿವರು ಹಾಗೂ ಸಮಾಲೋಚನಾ ಸಮಿತಿಯ ಸದಸ್ಯರು ಶುಕ್ರವಾರ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ನಾಡ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ನಂತರ ಸಚಿವರು ಹಾಗೂ ಸಮಿತಿಯ ಸದಸ್ಯರು ಮೈಸೂರು ಅರಮನೆಗೆ ಭೇಟಿ ನೀಡಿ, ಮೈಸೂರಿನ ಶ್ರೀಮಂತ ರಾಜಪರಂಪರೆ, ವಾಸ್ತುಶಿಲ್ಪ ಮತ್ತು…

Read More

ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ “ಕಂಬಳ” ನಡೆಯುವುದು ಖರೆ

ಮೈಸೂರು: ಈ ಬಾರಿಯ ನಡೆಯಲಿರುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿಯ ಸಾಂಪ್ರದಾಯಿಕ ಹಾಗೂ ಜನಪ್ರಿಯ ಕ್ರೀಡೆಯಾದ ಕಂಬಳವನ್ನು ಆಯೋಜಿಸುವುದು ಖಚಿತವಾಗಿದೆ.ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಸರ್ಕಾರ ನಿರ್ಧಾರ ಮಾಡಿ ಜಾಗ ಗುರುತಿಸಿ ಪರಿಶೀಲನೆಯೂ ನಡೆಸಿತ್ತು. ಆದರೆ ಇದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಆದರೂ ಸಹ ಕಂಬಳ ನಡೆಸಲು ಮುಂದಾಗಿರುವ ಸರ್ಕಾರ ಇದೀಗ ಇದಕ್ಕೆ ಉಪಸಮಿತಿಯನ್ನ ರಚನೆ ಮಾಡಿದ್ದು ಈ ಬಾರಿ ಕಂಬಳ ನಡೆಯುವುದು ಸಂಪೂರ್ಣವಾಗಿ ಖಚಿತವಾಗಿದೆ.ಹೌದು. ನಾಡಹಬ್ಬ ಮೈಸೂರು ದಸರಾ ಆಚರಣೆಗಾಗಿ ರಾಜ್ಯ…

Read More

ಕಬಿನಿ ಜಲಾಶಯದಿಂದ ಒಳ ಹರಿವಿಗಿಂತ ಎರಡು ಪಟ್ಟು ನೀರನ್ನು ನದಿಗೆ ಹರಿಸುತ್ತಿರುವ ಅಧಿಕಾರಿಗಳು !

*ಜಲಾಶಯದ ನೀರಿನ ಮಟ್ಟ 3 ಅಡಿ ಕುಸಿತು, ಇದೇ ರೀತಿ ನೀರು ಹರಿಸಿದರೆ ಒಂದೇ ವಾರದಲ್ಲಿ ಡ್ಯಾಂ ಖಾಲಿಮೈಸೂರು; ಕಾವೇರಿ ನೀರು ನಿರ್ವಹಣಾ ಸಮಿತಿಯ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿರುವ ಹಿನ್ನಲೆಯಲ್ಲಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಿಂದ ಒಳಹರಿವಿಗಿಂತ ಎರಡು ಪಟ್ಟು ನೀರನ್ನು ಅಧಿಕಾರಿಗಳು ನದಿಗೆ ಹರಿಬಿಡುವ ಮೂಲಕ ತಮಿಳುನಾಡಿಗೆ ಹರಿಸುತ್ತಿದ್ದಾರೆ.ಕಾವೇರಿ ನೀರು ನಿರ್ವಹಣಾ ಸಮಿತಿ ತಮಿಳುನಾಡಿಗೆ ನಿತ್ಯವೂ ನೀರು 12 ಸಾವಿರ ಕ್ಯೂಸೆಕ್ ಅಚಿದರೆ 1 ಟಿಎಂಸಿ ನೀರನ್ನು ಹರಿಸುವಂತೆ ಈಗಾಗಲೇ…

Read More