
ಮೈಸೂರು; ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕರಾಮುಕ್ತ ವಿವಿಯ ಡೀನ್ ಪೆÇ್ರ. ಎಂ ರಾಮನಾಥಂ ನಾಯುಡು ಮಾತನಾಡಿ,
ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಮಹತ್ವ ಉಪಯೋಗ ವಿಶೀಷ್ಟತೆ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತಂಜಲಿ ಯೋಗ ಶಿಕ್ಷಣ ಸಮಿತಿಯ ರಾಧ ಎಂ.ಡಿ ಮಾತನಾಡಿ, ಪ್ರಸ್ತುತ ವಿದ್ಯಾಮಾನಗಳಿಗೆ ಯೋಗ ಎಷ್ಟು ಅವಶ್ಯಕತೆ ಎಂಬುದನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುಲಸಚಿವ ಪೆÇ್ರ.ನವೀನ್ ಕುಮಾರ್ ಎಸ್ ಕೆ ಮಾತನಾಡಿ, ತಾಳ್ಮೆ, ಏಕಾಗ್ರತೆಗೆ ಯೋಗ ಎಷ್ಟು ಪರಿಣಾಮಕಾರಿ ಬೀರುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕುಲಸಚಿವ(ಪರೀಕ್ಷಾಂಗ) ಡಾ.ಸಿ.ಎಸ್ ಆನಂದಕುಮಾರ್, ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಕೃಷ್ಣಪ್ಪ ಎನ್, ಡಾ ಚಿದಾನಂದ.ಎಲ್, ಡಾ. ಕೃಷ್ಣಪ್ಪ.ಎನ್, ಶಿಕ್ಷಣ ಶಾಸ್ತ್ರ ವಿಭಾಗದವರು ಹಾಗೂ ವಿದ್ಯಾರ್ಥಿಗಳು ಅಧ್ಯಾಪಕರುಗಳು ಮತ್ತು ಆಧ್ಯಾಪಕೇತರ ಸಿಬ್ಬಂದಿ, ಸ್ಟುಡಿಯೊ ವಿಭಾಗದ ಸಿಬ್ಬಂದಿಗಳು ಹಾಜರಿದ್ದರು.ನಂತರ ಆಡಳಿತ ಭವನದ ಮುಂಭಾಗ ಯೋಗಭ್ಯಾಸ ಮಾಡಲಾಯಿತು.