
ಮೈಸೂರು; ನಗರದ ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನ ಪ್ರತಿಭಾವಂತ ಐವರು ವಿದ್ಯಾರ್ಥಿನಿಯರಿಗೆ ಮೈಸೂರಿನ ಎಸ್.ಎಂ.ಆರ್. ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಎಸ್.ಎಂ.ಆರ್. ಚಾರಿಟಬಲ್ ಟ್ರಸ್ಟ್ನ ನರಸಿಂಹ ಪ್ರಸಾದ್, ವಾದಿರಾಜ್, ಕೃಷ್ಣ ಜಿ.ವಿ., ಹರಿಹರ ದೀಕ್ಷಿತ್, ಅರುಣ್, ಕಾಲೇಜಿನ ಪ್ರಾಚಾರ್ಯರಾದ ಎಚ್. ಸತ್ಯಪ್ರಸಾದ್, ವಿದ್ಯಾರ್ಥಿನಿಯರಾದ ಸಿಂಚನ ಆರ್.ಜೆ., ವಂದನಾ ಎಂ., ಟಿ.ವಿ. ರಜನಿ, ಭುವನ ಹಾಗೂ ನಂದಿತಾ ಎಸ್. ಹಾಜರಿದ್ದರು.