
ಮೈಸೂರು; ವಿವೇಕಾನಂದ ಕೇಂದ್ರ ಕನ್ಯಾಕುಮಾರಿ, ಮೈಸೂರು ವಿಭಾಗದಿಂದ “ವಿಶ್ವ ಬಂಧುತ್ವ ದಿವಸ”ದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ಮೈಸೂರಿನ ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿದ್ದಾರೆ. ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಧೃತಿ ಲೋಕೇಶ್ ಪ್ರಥಮ ಬಹುಮಾನ, ಚಿತ್ರಕಲೆ ಸ್ಪರ್ಧೆಯಲ್ಲಿ ದಿವ್ಯಶ್ರೀ ಪ್ರಥಮ ಬಹುಮಾನ, ಲಿಖಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಶ್ರೀವಿದ್ಯಾ ಹಾಗೂ ರೋಹಿಣಿ ಪ್ರಥಮ ಬಹುಮಾನ, ವಂದೇ ಮಾತರಂ ವೃಂದಗಾಯನದಲ್ಲಿ ಶ್ರೀವಿದ್ಯಾ ಹಾಗೂ ತಂಡ ಪ್ರಥಮ ಬಹುಮಾನ, ಚಿತ್ರಕಲೆಯಲ್ಲಿ ರೋಮಿತ್ ರ್ಯ ದ್ವಿತೀಯ ಬಹುಮಾನ ಹಾಗೂ ಗುರುಪ್ರೀತ್ ತೃತೀಯ ಬಹುಮಾನ ಪಡೆದಿದ್ದಾರೆ. ಬಹುಮಾನ ವಿಜೇತ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.