Skip to main content

3Kaala News

ಸುಭಾಷಿತ 

ಜೀವನ ಅನ್ನುವ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷದ ಬುತ್ತಿಯನ್ನು ಇಟ್ಟು ಕಳಿಸುತ್ತಾನೆ. ಆದರೆ ನಾವು ನಮ್ಮ ಜೋಳಿಗೆಯಲ್ಲಿ ಏನಿದೆ ಎಂದು ನೋಡಿ ಆನಂದಪಡುವುದನ್ನು ಬಿಟ್ಟು,ಬೇರೆಯವರ ಜೋಳಿಗೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲದಿಂದ ಸದಾ ದುಃಖಿಯಾಗಿರುತ್ತೇವೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ: ನಿತಿನ್ ವೆಂಕಟೇಶ್

ಪಿರಿಯಾಪಟ್ಟಣ: ಕ್ರೀಡೆಯಲ್ಲಿ ಗೆಲುವು ಮುಖ್ಯವಾದರೂ ಗೆಲುವಿಗಿಂತ ಕ್ರೀಡಾ ಸ್ಫೂರ್ತಿಯಿಂದ ಎಲ್ಲರೂ ಭಾಗವಹಿಸಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ತಿಳಿಸಿದರು. ಪಟ್ಟಣದ ಆನೆಚೌಕೂರು ರಸ್ತೆಯ ಪುಷ್ಪ ಶಾಲೆಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕ್ರೀಡೆಯಲ್ಲಿ ಸತತ ಸೋಲೇ ಗೆಲುವಿನ ಮೆಟ್ಟಿಲು ಎಂಬ ಮಾತು ಕೇವಲ ಸುಳ್ಳು ಭರವಸೆಯಲ್ಲ, ಅದು ಕ್ರೀಡಾಲೋಕದ ಪರಮ ಸತ್ಯ. ಸೋಲುಗಳನ್ನು…

Read More

ಯೋಗದಲ್ಲಿ ನೂತನ ವಿಶ್ವ ದಾಖಲೆ ರಚಿಸಿದ ನೈಪುಣ್ಯ ವಿದ್ಯಾರ್ಥಿನಿ

ಮೈಸೂರು; ನಗರದ ಆರ್ ಟಿ ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ತ್ರಿಶಿಕಾ ಸಿ. ಎನ್ ಗೌಡ ಯೋಗ ಸ್ಪರ್ಧಾಕೂಟದಲ್ಲಿ ವಿಶ್ವ ದಾಖಲೆ ರಚಿಸುವ ಮೂಲಕ ಮೈಸೂರಿನ ಹೆಮ್ಮೆಗೆ ಇನ್ನೊಂದು ಗರಿ ಮೂಡಿಸಿದ್ದಾರೆ.ಬೋಗಾದಿಯ ಕೃಷ್ಣಮಾಚಾರ್ಯ ಯೋಗ ಕೇಂದ್ರದ ವಿದ್ಯಾರ್ಥಿನಿಯಾಗಿರುವ ಕು. ತ್ರಿಷಿಕಾ ಅವರು ಆಗಸ್ಟ್ 22 ರಂದು ಭಾರತೀಯ ಯೋಗಾಸನ ಕ್ರೀಡಾ ಫೆಡರೇಷನ್‌ನಿಂದ ಆಯೋಜಿಸಲಾದ ಏಕಕಾಲದಲ್ಲಿ ಅತಿ ಹೆಚ್ಚು ಮಂದಿ ತಲೆಯ ಮೇಲೆ ನೀರಿನ ಕಪ್‌ನ್ನು ಸಮತೋಲನದಲ್ಲಿರಿಸಿಕೊಂಡು 60 ಸೆಕೆಂಡುಗಳ…

Read More

ದೇವಸ್ಥಾನಗಳಿಗೆ ಭೇಟಿ ನೀಡಿದರೆ ಮನಸ್ಸಿಗೆ ನೆಮ್ಮದಿ; ಪ್ರೊಫೆಸರ್ ಆಶಾ

ವರದಿ ಜಿ ಬಂಗಾರು   ಚಾಮರಾಜನಗರ:    ದೇವಸ್ಥಾನಗಳಿಗೆ ಭೇಟಿ ನೀಡಿದರೆ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದು ಚಾಮರಾಜನಗರ ವಿಶ್ವವಿದ್ಯಾಲಯ ಪ್ರೊಫೆಸರ್ ಆಶಾ ತಿಳಿಸಿದರುಶ್ರೀ ವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆ ಏರ್ಪಡಿಸಿದ   ಗೌರಿ ಗಣೇಶ ಹಬ್ಬದ ಅಂಗವಾಗಿ ಚಾಮರಾಜೇಶ್ವರ ದೇವಸ್ಥಾನದಲ್ಲಿಮಹಿಳೆಯರು ಅತ್ಯಂತ ಸಡಗರ-ಸಂಭ್ರಮದಿಂದ ಗಣೇಶಗೌರಿಗೆ ಪೂಜೆ ಸಲ್ಲಿಸಿ, ಸುಮಂಗಲಿಯರು ಸ್ವರ್ಣಗೌರಿ ದೇವಿಗೆ ಬಾಗಿನ ಸಮರ್ಪಿಸಿದರು.    ಗೌರಮ್ಮನಿಗೆ ಸಾಂಪ್ರದಾಯಿಕವಾಗಿ  ಮೊರದ ಬಾಗಿನ ನೀಡುವ ಮೂಲಕ ಸೌಭಾಗ್ಯ, ನೆಮ್ಮದಿ ಮತ್ತು ಕುಟುಂಬದ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.  ಗೌರಿದೇವಿಗೆ ಬಾಗಿನ ಅರ್ಪಣೆ ವಿಶೇಷವಾದ್ದದು : ಅರ್ಚಕ ರಾಮಕೃಷ್ಣಭಾರಧ್ವಜ್‌ ಮಾತನಾಡಿ,…

Read More

ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದ ಪೌರ ಕಾರ್ಮಿಕರು

ಮೈಸೂರು: ನಗರದ ಸ್ವಚ್ಛತೆಗಾಗಿ ಶ್ರಮಿಸುವ ಪೌರ ಕಾರ್ಮಿಕರು ದಿನನಿತ್ಯದ ಕೆಲಸದ ಒತ್ತಡ, ಜಂಜಾಟ ಹಾಗೂ ದೈಹಿಕ ಶ್ರಮವನ್ನು ಕೆಲಕಾಲ ಮರೆತು, ಪೌರ ಕಾರ್ಮಿಕರು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.ಮೈಸೂರು ನಗರ ಪಾಲಿಕೆಯ ವತಿಯಿಂದ ನಗರದ ಒವಲ್ ಮೈದಾನದಲ್ಲಿ ಪೌರ ಕಾರ್ಮಿಕ ಸಿಬ್ಬಂದಿಗಾಗಿ ಮಹಿಳಾ ಮತ್ತು ಪುರುಷ ಸಿಬ್ಬಂದಿಗೆ ಪ್ರತ್ಯೇಕವಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು.ಮಹಿಳಾ ಪೌರ ಕಾರ್ಮಿಕರಿಗಾಗಿ ಹಗ್ಗ ಜಗ್ಗಾಟ, ಲೆಮನ್ ಸ್ಪೂನ್, ಥ್ರೋಬಾಲ್ ಹಾಗೂ ಬ್ಯಾಸ್ಕೆಟ್‌ಬಾಲ್ ಸೇರಿದಂತೆ ಹಲವು ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಮಹಿಳಾ ಪೌರ ಕಾರ್ಮಿಕರು,…

Read More

ವಿಷ್ಣು ವೈಭವ ಸಂಗೀತೋತ್ಸವ”

ಮೈಸೂರು; ಚಿತ್ರ ನಟ ಡಾ. ವಿಷ್ಣುವರ್ಧನ್ ರವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಅರುಣರಾಗ ಕ್ರಿಯೇಷನ್ಸ್ ವತಿಯಿಂದ “ವಿಷ್ಣು ವೈಭವ ಸಂಗೀತೋತ್ಸವ” ಎಂಬ ಸಂಗೀತ ಕಾರ್ಯಕ್ರಮವನ್ನು ಮೈಸೂರಿನ ಉದ್ದೂರ್ ಗೇಟ್‌ನಲ್ಲಿರುವ ಡಾ. ವಿಷ್ಣುವರ್ಧನ್ ಸ್ಮಾರಕದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕ್ರಿಯೇಷನ್ಸ್ ನ ಗುರುರಾಜ್ ತಿಳಿಸಿದರು.ಬುಧವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ವಿಷ್ಣುವರ್ಧನ್‌ರವರ ಚಲನಚಿತ್ರ ಗೀತೆಗಳನ್ನು ಹಾಡಿ ಹುಟ್ಟುಹಬ್ಬವನ್ನು ಆಚರಿಸಲಾಗುತ್ತದೆ. ಮುಖ್ಯ ಅತಿಥಿಗಳಾಗಿ ಡಾ. ಭಾರತಿ ವಿಷ್ಣುವರ್ಧನ್ ಆಗಮಿಸಲಿದ್ದಾರೆ. ವಿಶೇಷ ಆಕರ್ಷಣೆಯಾಗಿ ಜೂನಿಯರ್ ವಿಷ್ಣುವರ್ಧನ್,…

Read More

ದಸರಾದಲ್ಲಿ ಜಾನಪದ ಕಲಾವಿದರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸದಿದ್ದರೆ ಬಹಿಷ್ಕಾರ ಹಾಕುತ್ತೇವೆ; ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ ಎಚ್ಚರಿಕೆ

ಮೈಸೂರು; ನಾಡ ಹಬ್ಬ ಮೈಸೂರು ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಜಾನಪದ ಕಲಾವಿದರಿಗೆ ಹೆಚ್ಚಿನ ಸಂಭಾವನೆ ಮತ್ತು ಉತ್ತಮವಾದ ವಸತಿ, ಊಟದ ವ್ಯವಸ್ಥೆ ಮತ್ತು ಕಲಾತಂಡಗಳ ಪ್ರಯಾಣ ವೆಚ್ಚವನ್ನು ನೀಡಲು ಸಂಬAಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ದಸರಾವನ್ನು ಬಹಿಷ್ಕರಿಸಲಾಗುವುದು ಎಂದು ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ ಎಚ್ಚರಿಕೆ ನೀಡಿದೆ.ಬುಧವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಜೋಗಿಲ ಸಿದ್ದರಾಜು,ಮೈಸೂರು ದಸರಾವು ವಿಶ್ವವಿಖ್ಯಾತವಾಗಿರುವುದು ಪ್ರಮುಖವಾಗಿ ಜಂಬೂ ಸವಾರಿಯ…

Read More

ಆರ್‌ಎಸ್‌ಎಸ್ ಸಾಗಿ ಬಂದ ದಾರಿಯ ವಿಶಿಷ್ಟ “ಪ್ರದರ್ಶಿನಿ”

ಮೈಸೂರು: ಆರ್‌ಎಸ್‌ಎಸ್ ಶತಮಾನದ ಸೇವೆ-ಏಕತೆ- ತ್ಯಾಗದ ವಿಶ್ವರೂಪ ದರ್ಶನ ನಗರದ ಶ್ರೀ ಮಾಧವ ಕೃಪಾ ಗಣೇಶೋತ್ಸವದ ಈ ಬಾರಿಯ ವೈಶಿಷ್ಟ÷್ಯತೆ. ಈ “ಪ್ರದರ್ಶಿನಿ”ಯಲ್ಲಿ ಒಂದು ಸುತ್ತು ಸಾಗಿ ಬಂದರೆ, ಸಂಘ ಪರಿವಾರದ ಸಾಧನಾ ಪಥದ ಬ್ರಹ್ಮಾಂಡ ದರ್ಶನವಾಗುತ್ತದೆ. ಕೊನೆಯಲ್ಲಿ ನೋಡುಗರನ್ನು ಕಾದಿರುವ ಕನ್ನಡಿ, ಈ ದೇಶದ ಭವಿಷ್ಯ ಯಾರು ಅನ್ನುವ ಪ್ರಶ್ನೆಗೆ ಉತ್ತರವಾಗುತ್ತದೆ.ಒಳಗೆ ಬನ್ನಿ-ತಿಳಿಯಿರಿ- ಅನುಭವಿಸಿ” ಎನ್ನುತ್ತಲೇ ನೋಡುಗರನ್ನು ಆಹ್ವಾನಿಸುವ ಈ “ಪ್ರದರ್ಶಿನಿ” ಸಂಘ ಹುಟ್ಟಿದ್ದು ಯಾಕೆ? ಅದು ಕೆಲಸ ಮಾಡುವುದು ಹೇಗೆ? ನೂರು ವರ್ಷಗಳಲ್ಲಿ ಏನು…

Read More

ವಿಶ್ವೇಶ್ವರಯ್ಯ ಅವರ ಜೀವನ ಸಾಧನೆ ಯುವಜನರಿಗೆ ಪ್ರೇರಣೆ: ಡಾ. ಈ.ಸಿ. ನಿಂಗರಾಜ್‌ಗೌಡ

ಮೈಸೂರು: ಸರ್ ಎಂ. ವಿಶ್ವೇಶ್ವರಯ್ಯ ಅವರ ಜೀವನ ಸಾಧನೆ ಯುವಜನರಿಗೆ ಪ್ರೇರಣೆಯಾಗಿದೆ ಎಂದು ಬಿಜೆಪಿ ಮೈಸೂರು ವಿಭಾಗೀಯ ಸಹ ಪ್ರಭಾರಿ ಡಾ. ಈ.ಸಿ. ನಿಂಗರಾಜ್‌ಗೌಡ ಹೇಳಿದರು.ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜಯಂತಿಯನ್ನು ಮೈಸೂರಿನ ರೋಟರಿ ಸೌತ್ ಈಸ್ಟ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ “ಇಂಜನೀರ‍್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ ಎಂ. ವಿಶ್ವೇಶ್ವರಯ್ಯ ಅವರ ಜೀವನ, ಶಿಸ್ತು, ದೂರದೃಷ್ಟಿ ಹಾಗೂ ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಅವರು ನೀಡಿದ ಅಮೂಲ್ಯ ಕೊಡುಗೆಗಳ ಕುರಿತು ಸುದೀರ್ಘವಾಗಿ ತಿಳಿಸಿದರು.ಸರ್…

Read More

ವಿವಿಧ ಸ್ಪರ್ಧೆಗಳಲ್ಲಿ ಸಾಧನೆಗೈದ ವಿಜಯ ವಿಠ್ಠಲ ವಿದ್ಯಾರ್ಥಿಗಳು

ಮೈಸೂರು; ವಿವೇಕಾನಂದ ಕೇಂದ್ರ ಕನ್ಯಾಕುಮಾರಿ, ಮೈಸೂರು ವಿಭಾಗದಿಂದ “ವಿಶ್ವ ಬಂಧುತ್ವ ದಿವಸ”ದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ಮೈಸೂರಿನ ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿದ್ದಾರೆ. ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಧೃತಿ ಲೋಕೇಶ್ ಪ್ರಥಮ ಬಹುಮಾನ, ಚಿತ್ರಕಲೆ ಸ್ಪರ್ಧೆಯಲ್ಲಿ ದಿವ್ಯಶ್ರೀ ಪ್ರಥಮ ಬಹುಮಾನ, ಲಿಖಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಶ್ರೀವಿದ್ಯಾ ಹಾಗೂ ರೋಹಿಣಿ ಪ್ರಥಮ ಬಹುಮಾನ, ವಂದೇ ಮಾತರಂ ವೃಂದಗಾಯನದಲ್ಲಿ ಶ್ರೀವಿದ್ಯಾ ಹಾಗೂ ತಂಡ ಪ್ರಥಮ ಬಹುಮಾನ, ಚಿತ್ರಕಲೆಯಲ್ಲಿ ರೋಮಿತ್ ರ‍್ಯ ದ್ವಿತೀಯ…

Read More