Category: ಸಂಸ್ಕ್ರುತಿ
ದೇವಸ್ಥಾನಕ್ಕೆ ಯಾಕೆ ಹೋಗ್ಬೇಕು, ವೈಜ್ಞಾನಿಕ ಹಿನ್ನಲೆ ಏನು
ದೇವಸ್ಥಾನಕ್ಕೆ ಯಾಕೆ ಹೋಗ್ಬೇಕು ವೈಜ್ಞಾನಿಕ ಕಾರಣ ವಾಸ್ತು ಶಾಸ್ತ್ರ ಹಾಗು ಪುರಾಣದ ಪ್ರಕಾರ :ದೇವಾಲಯಗಳು ದೇವರ ಪವಿತ್ರ ಸ್ಥಾನವೇ ಆಗಿದೆ ದೇವಸ್ಥಾನದ ವಿವಿಧ ಭಾಗಗಳನ್ನು ಮನುಷ್ಯನ ದೇಹಕ್ಕೆ ಹೋಲಿಸಲಾಗುತ್ತದೆ. ಅಗ್ನಿ ಪುರಾಣದ ಪ್ರಕಾರ “ಶಿಖರಂ ಶಿರ ಇತ್ಯಾಹುರಿಗರ್ಭಗೆಹಂ ಗಳಸ್ತಥಾ ಮಂಡಪಂ ಕುಕ್ಷಿರಿತ್ಯಾಹುಹ್ ಪ್ರಕಾರಂ ಜನುಜಂಘಾಕಂ ಗೋಪುರಮ್ ಪಾದ ಇತ್ಯಾಹುರ್ಧ್ವಜೋ ಜೀವನಮುಚ್ಯತೇ “ ಅಂದರೆ ಶಿಖರ ತಲೆ ಭಾಗ , ಗರ್ಭ ಗುಡಿ ಕುತ್ತಿಗೆ, ಮಂಟಪದ ಸೊಂಟದ ಭಾಗ , ಗೋಪುರ ಕಾಲುಗಳು ಮತ್ತು ಧ್ವಜ ದೇವಾಲಯದ ಜೀವ…
ಗಟ್ಟವಾಡಿ ಗ್ರಾಮದ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಯಾಗಲಿದೆ ಪಂಚಮುಖಿ ಆಂಜನೇಯ ಹಾಗೂ ಲಕ್ಷ್ಮಿನರಸಿಂಹ ಮೂರ್ತಿಗಳು
ಮೈಸೂರು; ಜಿಲ್ಲೆಯ ನಂಜನಗೂಡು ತಾಲೂಕು ಗಟ್ಟವಾಡಿ ಗ್ರಾಮದ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಪಂಚಮುಖಿ ಆಂಜನೇಯ ಹಾಗೂ ಲಕ್ಷ್ಮಿನರಸಿಂಹ ಮೂರ್ತಿಗಳು ಮೈಸೂರಿನ ಶ್ರೀ ಗಣಪತಿ ಆಶ್ರಮಕ್ಕೆ ಆಗಮಿಸಿದವು.ಕಂಚಿಯಲ್ಲಿ ಸಿದ್ದವಾದ 6 ಅಡಿ ಎತ್ತರದ ಲಕ್ಷ್ಮಿನರಸಿಂಹ ಹಾಗೂ ಕೋಲಾರದ ಮಾಲೂರಿನಲ್ಲಿ ಸಿದ್ದವಾದ 5.5 ಅಡಿ ಎತ್ತರದ ಪಂಚಮುಖಿ ಆಂಜನೇಯ ವಿಗ್ರಹಗಳು ಗಟ್ಟವಾಡಿ ಗ್ರಾಮದ ಶ್ರೀ ಸುಭ್ರಹ್ಮಣ್ಯ ಕ್ಷೇತ್ರಕ್ಕೆ ತಲುಪುವ ಮುನ್ನ ಗಣಪತಿ ಆಶ್ರಮಕ್ಕೆ ತಲುಪಿತು. ದತ್ತ ಆಶ್ರಮದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ಸ್ವಾಮೀಜಿಗಳು ವಿಗ್ರಹಗಳಿಗೆ ವಿಶೇಷ ಪೂಜೆ…
ಯಾವಾಗಲೂ ಹಿರಿಯರ ಮಾರ್ಗದರ್ಶನದಲ್ಲಿಯೇ ಜೀವನ ನಿರ್ವಹಣೆ ಮಾಡಬೇಕು; ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ
ಮೈಸೂರು: ಮಕ್ಕಳು ಹೆತ್ತವರ ಮಾತನ್ನು ಕೇಳಬೇಕು. ಯಾವಾಗಲೂ ಹಿರಿಯರ ಮಾರ್ಗದರ್ಶನದಲ್ಲಿಯೇ ಜೀವನ ನಿರ್ವಹಣೆ ಮಾಡಬೇಕು ಎಂದು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಹೇಳಿದರು.ಅಧಿಕ ಜ್ಯೇಷ್ಠ ಮಾಸದ ಅಂಗವಾಗಿ ಉತ್ತರಾದಿ ಮಠವು ಮೈಸೂರಿನ ಅಗ್ರಹಾರದ ಕಾಶಿ ವಿಶ್ವೇಶ್ವರ ಸನ್ನಿಧಿ ಆವರಣದ ಬೃಹತ್ ವೇದಿಕೆಯಲ್ಲಿ ಹಮ್ಮಿಕೊಂಡಿರುವ ಧರ್ಮ ಸಭೆಯಲ್ಲಿ ಅವರು ಭಾಗವತ ಸಂದೇಶ ನೀಡಿದರು.ಗೋಕುಲದಲ್ಲಿ ಬೆಳೆಯುತ್ತಿದ್ದ ಶ್ರೀ ಕೃಷ್ಣ, ಎಲ್ಲರ ಮನೆಯಲ್ಲಿ ಮೊಸರು, ಬೆಣ್ಣೆ ಕದಿಯುತ್ತಿದ್ದ. ಯಾವ ವಸ್ತು ಅತ್ಯಂತ ಶ್ರೇಷ್ಠವೋ…
ಭಗವದ್ಗೀತೆ ಇಂದಿಗೂ ಬದುಕಿನ ಕೈಪಿಡಿಯಾಗಿ ಉಳಿದಿದೆ
ಭಗವದ್ಗೀತೆಯ ಮೊದಲ ಅಧ್ಯಾಯವೇ “ಅರ್ಜುನ ವಿಷಾದ ಯೋಗ”.ಇಲ್ಲಿ ಯುದ್ಧಭೂಮಿಯಲ್ಲಿ ನಿಂತ ಅರ್ಜುನನ ಮನಸ್ಥಿತಿ, ಗೊಂದಲ, ಭಯ, ತಪ್ಪಿತಸ್ಥ ಭಾವನೆ ಮತ್ತು ಆತ್ಮವಿಶ್ವಾಸ ಕಳೆದುಕೊಂಡ ಸ್ಥಿತಿಯನ್ನು ಅತ್ಯಂತ ಆಳವಾಗಿ ಚಿತ್ರಿಸಲಾಗಿದೆ. “ಸಮಸ್ಯೆ ಹೊರಗಿನ ಪರಿಸ್ಥಿತಿಯಲ್ಲಿ ಅಲ್ಲ; ಅದನ್ನು ನಾವು ನೋಡುವ ಮನಸ್ಥಿತಿಯಲ್ಲಿ ಇದೆ” ಎಂಬುದು. ಭಗವದ್ಗೀತೆಯ ಕೆಲವು ಪ್ರಮುಖ ಶ್ಲೋಕಗಳೊಂದಿಗೆ ಇದನ್ನು ನೋಡೋಣ ಕುರುಕ್ಷೇತ್ರದಲ್ಲಿ ಅರ್ಜುನನ ವಿಷಾದ ಕುರುಕ್ಷೇತ್ರ ಯುದ್ಧ ಆರಂಭವಾಗಲು ಸಿದ್ಧವಾಗಿತ್ತು.ಅರ್ಜುನನು ತನ್ನ ರಥವನ್ನು ಎರಡೂ ಸೇನೆಗಳ ಮಧ್ಯೆ ನಿಲ್ಲಿಸು ಎಂದು ಕೃಷ್ಣನಿಗೆ ಹೇಳುತ್ತಾನೆ. “ಓ ಕೃಷ್ಣಾ!…
ಏಕಾದಶಿ ಉಪವಾಸ ವ್ರತ ಆಚರಣೆಗೆ ಯಾವುದೇ ಜಾತಿ , ಮತ ಧರ್ಮಗಳ ಚೌಕಟ್ಟು ಇಲ್ಲ; ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ
ಮೈಸೂರು: ಭಾಗವತ ಪ್ರತಿಪಾದಿಸಿದಂತೆ ಏಕಾದಶಿ ಉಪವಾಸ ವ್ರತವನ್ನು ಆಚರಣೆ ಮಾಡಬೇಕು. ಇದಕ್ಕೆ ಯಾವುದೇ ಜಾತಿ , ಮತ ಧರ್ಮಗಳ ಚೌಕಟ್ಟು ಇಲ್ಲ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ತಿಳಿಸಿದರು.ಅಧಿಕ ಜೇಷ್ಠ ಮಾಸದ ಅಂಗವಾಗಿ ನಗರದ ಅಗ್ರಹಾರದ ಉತ್ತರಾದಿ ಮಠದಲ್ಲಿ ಹಮ್ಮಿಕೊಂಡಿರುವ ವಿಶೇಷ ಜ್ಞಾನ ಸತ್ರ , ಏಕಾದಶಿ ಆಚರಣೆ ಸಂದರ್ಭ ಅವರು ಅನುಗ್ರಹ ಸಂದೇಶ ನೀಡಿ ಮಾತನಾಡಿದ ಅವರು, ಎಲ್ಲ ವ್ರತಗಳಿಗಿಚಿತ ಏಕಾದಶಿ ವ್ರತವು ಅತ್ಯಂತ ಶ್ರೇಷ್ಠವಾಗಿದೆ . ಭಗವಂತನು ವಿವಿಧ ವ್ರತ…
ಒಗ್ಗಟ್ಟಿನಿಂದ ಇದ್ದರೆ ಬಾಂಧವ್ಯ ವೃದ್ಧಿ: ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ. ರಾಜೀವ್
ಮೈಸೂರು: ಬ್ರಾಹ್ಮಣ ಸಮುದಾಯವು ಸಂಘಟಿತವಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಮಾತ್ರ, ಸಮಾಜದ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲು ಸಾಧ್ಯ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದರು.ಮೈಸೂರಿನ ದಟ್ಟಗಳ್ಳಿಯ ಸಾ.ರಾ.ಕನ್ವೆನ್ಸನ್ ಹಾಲ್ನಲ್ಲಿ ನಡೆದ ಮೂಗೂರು ಕರ್ನಾಟಕ ಬ್ರಾಹ್ಮಣ ಸಂಘದ ಶತಮಾನೋತ್ಸವ ಸಂಭ್ರಮ, ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳ ಪುರ ಸ್ಥಾರ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮುದಾಯದ ಪ್ರಗತಿಗೆ ಆಂತರಿಕ ಒಗ್ಗಟ್ಟು ಮತ್ತು ಸಂಘಟನಾ ಶಕ್ತಿ ಪ್ರಮುಖ ಆಧಾರಗಳಾಗಿವೆ….
ಲೋಕಕ್ಕೆ ಬೆಳಕಾಗಿರುವ ದಾಸ ಸಾಹಿತ್ಯದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಲಿ; ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ
ಮೈಸೂರು: ಲೋಕಕ್ಕೆ ಬೆಳಕಾಗಿರುವ ದಾಸ ಸಾಹಿತ್ಯದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಲಿ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಹೇಳಿದರು.ಶನಿವಾರ ಅಗ್ರಹಾರದ ದಿವಾನ್ ಪೂರ್ಣಯ್ಯ ಛತ್ರದಲ್ಲಿ ಏರ್ಪಡಿಸಲಾಗಿದ್ದ ವಿಶ್ವಮಧ್ವ ಮಹಾಪರಿಷತ್ತಿನ ಅಂಗಸAಸ್ಥೆಯಾದ ಸೌರಭ ದಾಸ ಸಾಹಿತ್ಯ ವಿದ್ಯಾಲಯದ 9ನೇ ಸಮ್ಮೇಳನ, 2 ದಿನಗಳ ವಿಶ್ವ ಸಮಾವೇಶ ಮತ್ತು ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಅಮೃತೋಪದೇಶ ನೀಡಿದರು.ಜ್ಞಾನಿಗಳ, ಯತಿವರೇಣ್ಯರ, ಆಚಾರ್ಯ ಮಧ್ವರ ಮತ್ತು ಹರಿದಾಸರ ಸಂದೇಶ ಮತ್ತು ತತ್ವ ಚಿಂತನೆಗಳು ಸಮದಾಯದ ಎಲ್ಲೆಯನ್ನು ಮೀರಿ, ವಿಶ್ವದ ಜನರ…
ಮೇ 30ಕ್ಕೆ ಸೌರಮಾನ ಶ್ರೀ ಲಕ್ಷಿನರಸಿಂಹ ಜಯಂತಿ ಹಾಗೂ ವಿಶೇಷ ‘ಸ್ವಾತಿ’ ಪೂಜೆ
ಮೈಸೂರು; ನಗರದ ಕಾಳಿದಾಸ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಯದುಗಿರಿ ಯತಿರಾಜ ಮಠ, ಮೈಸೂರು ಶಾಖೆಯ ಶ್ರೀ ಲಕ್ಷಿö್ಮÃನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮೇ 30ರಂದು ಶ್ರೀ ಯದುಗಿರಿ ಯತಿರಾಜ ರಾಮಾನುಜ ಜೀಯರ್ರವರ ದಿವ್ಯ ಅನುಗ್ರಹದೊಂದಿಗೆ ಸೌರಮಾನ ಶ್ರೀ ಲಕ್ಷಿö್ಮÃನರಸಿಂಹ ಜಯಂತಿ ಹಾಗೂ ವಿಶೇಷ ‘ಸ್ವಾತಿ’ ಪೂಜೆ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 7.30ಕ್ಕೆ ವಿಶ್ವರೂಪ ದರ್ಶನ, 8.45ಕ್ಕೆ ಶ್ರೀ ಲಕ್ಷಿö್ಮÃನರಸಿಂಹಸ್ವಾಮಿ ನವಕಲಶ ಸ್ಥಾಪನ ತಿರುಮಂಜನ (ಅಭಿಷೇಕ) ಮತ್ತು ದಿವ್ಯ ಪ್ರಬಂದ ಪಾರಾಯಣ, ಮಧ್ಯಾಹ್ನ 1ಕ್ಕೆ ವಿಶೇಷ ಅಲಂಕಾರ, ಮಂತ್ರಪುಷ್ಪ,…