ಕೃಷಿ ಲಾಭಕ್ಕಾಗಿ ಅಲ್ಲ ,ಮನಶಾಂತಿ , ಉತ್ತಮ ಆರೋಗ್ಯಕ್ಕಾಗಿ; ಕುರುಬೂರ್ ಶಾಂತಕುಮಾರ್
ಮೈಸೂರು; ರೈತರು ಜಮೀನುಗಳಲ್ಲಿ ಕೃಷಿ ಮಾಡುವುದು ಲಾಭಕ್ಕಾಗಿ ಅಲ್ಲ, ಮನಶಾಂತಿ, ಉತ್ತಮ ಆರೋಗ್ಯಕ್ಕಾಗಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದರು.ಗುರುವಾರ ಮೈಸೂರು ತಾಲೂಕಿನ ವರುಣ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿವರ್ತನಾ ಬಿಜಿನೆಸ್ ಸ್ಕೂಲ್ ಅಗ್ರಿಟೆಕ್ ತಂಡದವರು ಹಮ್ಮಿಕೊಂಡಿದ್ದ ಸಮಗ್ರ ಕೃಷಿ ಬೇಸಾಯ ರೈತ ಜಾಗೃತಿ ಕುರಿತು ಸಮಾವೇಶವನ್ನು ಶಾಲೆಯ ಆವರಣದಲ್ಲಿ ಶಾಲಾ ಮಕ್ಕಳ ಜೊತೆ ಗಿಡ ನೆಟ್ಟು. ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಮಗ್ರ ಕೃಷಿ ಬೇಸಾಯ…