ತಂಗಿಯ ಮಗನ ಹತ್ಯೆಗೆ ೩೦ ಲಕ್ಷ ಸುಪಾರಿ ನೀಡಿದ್ದ ಅಣ್ಣ !; ಆರು ಮಂದಿ ಆರೋಪಿಗಳ ಬಂಧನ
ಮೈಸೂರು: ಆಸ್ತಿ ವಿಚಾರಕ್ಕೆ ತಂಗಿಯ ಮಗನ ಕೊಲೆ ಮಾಡಿಸಲು ಅಣ್ಣನೇ ೩೦ ಲಕ್ಷ ರೂ. ಸುಪಾರಿ ನೀಡಿದ್ದಪ್ರಕರಣವನ್ನು ಜಿಲ್ಲೆಯ ಪಿರಿಯಾಪಟ್ಟಣ ಠಾಣೆಯ ಪೊಲೀಸರು ಭೇದಿಸಿದ್ದು, ಪ್ರಕರಣದಲ್ಲಿ ಅಣ್ಣ ಸೇರಿದಂತೆ ೬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.ಪ್ರಕರಣದ ಪ್ರಮುಖ ಆರೋಪಿಯಾದ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ರಾಜು @ ಸೌದೆ ರಾಜು (೫೭) ವರ್ಷ, ಸುಳ್ಯತಾಲೂಕಿನ ಸಂಪಾಜೆಯ ನಿವಾಸಿ ಶಫೀ.ಕೆ.ಪಿ , ಪಿರಿಯಾಪಟ್ಟಣದ ಶಿವಪುರ ಬಡಾವಣೆಯಮೀರ್ ಹುಸೇನ್ ಅಲಿ @ ಸುಲ್ತಾನ್ , ನಯಾಜ್…